ಬೆಳ್ತಂಗಡಿ : ಕೊಯ್ಯೂರು ಪಾಂಬೆಲ್ ನಿವಾಸಿ ಸುಮಾರು 27 ವರ್ಷದಿಂದ ಬೆಂಗಳೂರುನಲ್ಲಿ ವಕೀಲ ವೃತ್ತಿಯಲ್ಲಿ ನಿರತರಾಗಿರುವ ಹೈಕೋರ್ಟ್ ಹಿರಿಯ ನ್ಯಾಯವಾದಿ ಕರುಣಾಕರ ಗೌಡ ಅವರು ಭಾರತ ಸರ್ಕಾರದ ಅವಿಭಾಜ್ಯ ಸಂಸ್ಥೆಯಾದ ಆರ್ಥಿಕ ಕಾನೂನುಗಳನ್ನು ಶಿಸ್ತು ಬದ್ಧವಾಗಿ ಜಾರಿಮಾಡುವ (Enforcement Directorate – ED) ಆಯ್ಕೆಯಾಗಿದ್ದಾರೆ.
ತನ್ನ ಖಾಸಗಿ ವೃತ್ತಿಯ ಜೊತೆಗೆ ಇ.ಡಿ ಪರ ಕೆಲಸಗಳನ್ನು ವಹಿಸಲು ಸರಕಾರ ಇವರನ್ನು ನಿಯೋಜಿಸಿದೆ. ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ದಿ. ಡೊಂಬಯ್ಯ ಗೌಡ ಪುತ್ರರಾಗಿದ್ದಾರೆ.













