September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಅಯೋದ್ಯೆ ಶ್ರವಣಧಾಮಕ್ಕೆ ಭೇಟಿ

ಬೆಳ್ತಂಗಡಿ: ಉತ್ತರ ಭಾರತದ ಪ್ರವಾಸದಲ್ಲಿರುವ ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಮಹಾ ಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಅ. 12ರಂದು ಅಯೋದ್ಯೆ ಶ್ರವಣಧಾಮಕ್ಕೆ ಭೇಟಿ ನೀಡಿದರು.

ರಾಮಾಯಣ ಕಾಲದ ಶ್ರವಣ ಕುಮಾರನ ಚರಿತ್ರೆಯಲ್ಲಿ ಕುರುಡರಾದ ವೃದ್ಧ ತಂದೆ ತಾಯಿಯನ್ನು ತಕ್ಕಡಿಯಲ್ಲಿ ಕೂರಿಸಿ ತನ್ನ ಭುಜದ ಮೇಲೆ ಹೊತ್ತುಕೊಂಡು ಅಯೋಧ್ಯೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದ ಒಂದು ಜಾಗದಲ್ಲಿ ಕುಳ್ಳಿರಿಸಿ ಅವರಿಗೆ ಬಾಯಾರಿಕೆಗಾಗಿ ನೀರು ತರಲು ಹೋದ ಸಂದರ್ಭದಲ್ಲಿ ನೀರು ಬಿಂದಿಗೆಗೆ ತುಂಬಿಸುವ ಶಬ್ದ ಬಂದಾಗ ಜಿಂಕೆ ಒಂದು ನೀರು ಕುಡಿಯಲು ಬಂದಿದೆ ಎಂದು ತಿಳಿದ ಚಕ್ರವರ್ತಿ ಮಹಾರಾಜ ದಶರಥನು ಶಬ್ದವೇದಿ ಬಾಣ ಪ್ರಯೋಗಿಸಿದಾಗ ಶ್ರವಣ ಕುಮಾರನ ಹತ್ಯೆಯಾಗುತ್ತದೆ. ಶ್ರವಣಕುಮಾರನ ತಂದೆ ತಾಯಿಗಳು ದಶರಥ ಮಹಾರಾಜರಿಗೆ ಶಾಪ ಕೊಟ್ಟಂತ ಸ್ಥಳ ಇಂದು ಶ್ರವಣಧಾಮ ಎಂಬ ಹೆಸರಿನಿಂದ ಬಹುದೊಡ್ಡ ಪುಣ್ಯಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ತಮ್ಮ ಶಿಷ್ಯ ಪರಿವಾರದೊಂದಿಗೆ ಹೋಗಿ, ಕ್ಷೇತ್ರ ದರ್ಶನ ಮಾಡಿದರು.

Related posts

ಚಿಬಿದ್ರೆ ನಿವಾಸಿ ಕಟ್ಟೆ ಅಬ್ದುಲ್ ರಝಾಕ್ ಎ.ಕೆ. ಹೃದಯಾಘಾತದಿಂದ ನಿಧನ

Suddi Udaya

ನಡ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ರೂ.1 ಕೋಟಿ ಅನುದಾನ ಮಂಜೂರು :ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ಒಕ್ಕಲಿಗ ಗೌಡರ ಯುವ ವೇದಿಕೆ ನೇತೃತ್ವದಲ್ಲಿ,ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೆಂಪೇಗೌಡ ಜಯಂತಿ ಆಚರಣೆ, ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಖಂಡನೆ

Suddi Udaya

ಸವಣಾಲು ಅ.ಹಿ.ಪ್ರಾ. ಶಾಲೆಗೆ ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಪುಸ್ತಕ ಹಾಗೂ ಪೀಠೋಪಕರಣಗಳ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಮೆಶಿನ್ ಅಳವಡಿಕೆ

Suddi Udaya
error: Content is protected !!