ಧರ್ಮಸ್ಥಳ: ಇಲ್ಲಿಯ ಮುಂಡ್ರುಪಾಡಿ ನಿವಾಸಿ ಗಂಗಾಧರ ಬೇಕಲ್ (62ವ)ರವರು ಅಸೌಖ್ಯದಿಂದ ಅ.15ರಂದು ರಾತ್ರಿ ನಿಧನರಾದರು.
ಮೃತರು ಧರ್ಮಸ್ಥಳದಲ್ಲಿ ಅಂಗಡಿಯನ್ನು ಹೊಂದಿದ್ದು, ಧರ್ಮಸ್ಥಳ ಸಹಕಾರಿ ಸಂಘದ ಮಾಜಿ ನಿರ್ದೇಶಕರಾಗಿ, ವಿಶ್ವ ಹಿಂದೂ ಪರಿಷತ್ ನ ಸಂಚಾಲಕರಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ, ಬಿಜೆಪಿಯ ಸಕ್ರಿಯ ಸದಸ್ಯರಾಗಿ ಹಾಗೂ ಇನ್ನಿತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಮಲ್ಲಿಕಾ, ಪುತ್ರ ಭುವನ್, ಪುತ್ರಿಯರಾದ ರಕ್ಷಿತಾ, ಶ್ರಾವಣಿ, ಬಂಧು ಬಳಗವನ್ನು ಅಗಲಿದ್ದಾರೆ.











