ಬೆಳ್ತಂಗಡಿ ನಗರ ಪಂಚಾಯತ್ ಹತ್ತಿರದ ಮಹಿಳಾ ಮಂಡಲಗಳ ಒಕ್ಕೂಟ ಕಟ್ಟಡದಲ್ಲಿ ಸಾಯಿನಾಥ್ ಗೌಡ ಇವರ ನೂತನ ವಕೀಲರ ಕಛೇರಿ ಅ. 20ರಂದು ಶುಭಾರಂಭಗೊಂಡಿತು.

ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ನ ಹಿರಿಯ ವಕೀಲರಾದ ಪಿ ಪಿ ಹೆಗ್ಡೆ ಯವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕ್ಕಡ, ಹಾಗೂ ಬೆಳ್ತಂಗಡಿ ವಕೀಲರುಗಳಾದ ಮನೋಹರ ಕುಮಾರ್, ಅನಿಲ್ ಕುಮಾರ್ ಮತ್ತು ಮಂಗಳೂರಿನ ವಕೀಲ ಮಿತ್ರಳುಗಳಾದ ರಾಜೇಶ್ ಕುಮಾರ್ ಅಮ್ಟಾಡಿ, ಸಚಿನ್ ದೇವೇಂದ್ರ, ರಾಘವೇಂದ್ರ ರಾವ್, ಗಿರೀಶ್ ಶೆಟ್ಟಿ, ನಾರಾಯಣ ಗೌಡ, ಶ್ರೀಮತಿ ಮೋಹಿನಿ.ಎಸ್ ಉಪಸ್ಥಿತರಿದ್ದರು.
ಸಾಯಿನಾಥ್ ಗೌಡ ಇವರು ಖ್ಯಾತ ವಕೀಲರರಾದ ಪಿ ಪಿ ಹೆಗ್ಡೆ ಇವರ ಮಂಗಳೂರಿನ ಕಚೇರಿಯಲ್ಲಿ ಕಿರಿಯ ವಕೀಲರಾಗಿ ವಕೀಲಿ ವೃತ್ತಿ ಮಾಡುತ್ತಿದ್ದರು.











