25.7 C
ಪುತ್ತೂರು, ಬೆಳ್ತಂಗಡಿ
March 7, 2026
Uncategorized

ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಂದಗೋಕುಲ ಗೋಶಾಲೆ ಯಲ್ಲಿ ಗೋಪೂಜೆ


ಬೆಳ್ತಂಗಡಿ :ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ, ಕೇಂದ್ರ ಕಚೇರಿ ತುಮಕೂರು,ನೇತ್ರಾವತಿ ವಲಯ ,ಮಂಗಳೂರು,ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಯೋಗ ಬಂಧುಗಳು ಕಾಯರ್ತಡ್ಕದ ಶ್ರೀ ನಂದಗೋಕುಲ ಗೋಶಾಲೆ* ಯಲ್ಲಿ ಸಾಮೂಹಿಕ ಗೋಪೂಜೆ ಯನ್ನು ಆಚರಿಸಿದರು.


ಸುಮಾರು 90 ಕ್ಕೂ ವಿಕ್ಕಿ ಯೋಗ ಬಂಧುಗಳು ಗೋಶಾಲೆಯನ್ನು ಹಾಗೂ ಗೋವುಗಳನ್ನು ಸ್ವಚ್ಛಗೊಳಿಸಿ ಗೋಮಾತೆಗೆ ಅಲಂಕಾರ ಮಾಡಿ ಆರತಿಯನ್ನು ಬೆಳಗಿ ಗೋಗ್ರಾಸವನ್ನು ನೀಡುವ ಮೂಲಕ ಗೋಪೂಜೆಯನ್ನು ನೆರವೇರಿಸಿದರು. ಯೋಗ ಬಂಧುಗಳಾದ ವಸಂತ ಕೆಂಬರ್ಜೆ ದಂಪತಿಗಳು ಗೋಪೂಜೆಯ ಮುಂದಾಳತ್ವ ವನ್ನು ವಹಿಸಿದರು.
ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ ಯೋಗ ತರಗತಿಯ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಇವರ ನೇತೃತ್ವದಲ್ಲಿ ಸಹ ಶಿಕ್ಷಕರುಗಳಾದ ಸಂತೋಷ ಕಾಪಿನಡ್ಕ ,ಸುಕೇಶ್ ಗೇರುಕಟ್ಟೆ, ಶಶಿಕಲಾ ವಿಶ್ವನಾಥ್, ಕೋಮಲ ಪ್ರಕಾಶ್, ಗಣೇಶ್ ಪ್ರಸಾದ್, ರಕ್ಷಿತಾ ಪ್ರಸಾದ್ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವು ಸಂಪನ್ನಗೊಂಡಿತು. ಗೋಶಾಲೆಯ ಸಿಬ್ಬಂದಿಗಳು ಸಂಪೂರ್ಣ ಸಹಕಾರವನ್ನು ನೀಡಿದರು. ಯೋಗ ಬಂಧುಗಳಾದ ಅಶ್ವಥ್ ಇವರು ಗೋ ಪೂಜೆಯ ಮಹತ್ವ ಹಾಗೂ ಅವಶ್ಯಕತೆಯ ಬಗ್ಗೆ ಬೌದ್ಧಿಕವನ್ನು ನೀಡಿದರು. ಹಾಗೂ ಶ್ರೀಮತಿ ರವಿಕಲ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Related posts

ಪದ್ಮುಂಜ : ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪೂರ್ವ ತಯಾರಿ ಕಾಮಗಾರಿಗಳ ವೀಕ್ಷಣೆ

Suddi Udaya

ನಮ್ಮ ಬದುಕನ್ನು ರೂಪಿಸುವ ಅಡಿಪಾಯವೇ ಶಿಕ್ಷಣ-ಡಾ. ನವೀನ್ ಕುಮಾರ್ ಜೈನ್.

Suddi Udaya

ಸೌತಡ್ಕ ದೇವಸ್ಥಾನ: ಗಂಟೆ ಹಗರಣ ಮತ್ತು ಹುಂಡಿ ಹಗರಣದ ಮರು ತನಿಖೆ ನಡೆಸಿ ವರದಿ ನೀಡಲು ಸೂಚನೆ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಗೆ ಶೇ. 100

Suddi Udaya

ನವ ಭಾರತ’ ಸಂಘಟನೆಯ ಆಶ್ರಯದಲ್ಲಿ ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ಸಂಸ್ಕಾರ ಶಿಬಿರದ ಉದ್ಘಾಟನೆ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya
error: Content is protected !!