ಧರ್ಮಸ್ಥಳ: ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ವತಿಯಿಂದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಪ್ರಯುಕ್ತ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಗೌರವಾಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಉಮೇಶ್ ಕುಲಾಲ್ ಗುರುವಾಯನಕೆರೆ , ಛಾಯಾ ಕಾರ್ಯದರ್ಶಿ ಸಂದೇಶ್ ನಿಡ್ಲೆ, ಮಾಜಿ ಅಧ್ಯಕ್ಷರುಗಳು ವಸಂತ್ ಶರ್ಮ ಉಜಿರೆ, ಕಿರಣ್ ಕುಮಾರ್ ಅಳದಂಗಡಿ, ಸದಸ್ಯರುಗಳಾದ ರಾಮಕೃಷ್ಣ ರೈ ಉಜಿರೆ, ವಿಶ್ವನಾಥ್ ಧರ್ಮಸ್ಥಳ, ಸತೀಶ್ ಧರ್ಮಸ್ಥಳ, ವಿಕ್ರಂ ಗೌಡ ಧರ್ಮಸ್ಥಳ, ಪ್ರಭಾಕರ್ ಧರ್ಮಸ್ಥಳ, ಮಹಾವೀರ ಜೈನ್ ಉಜಿರೆ, ಸಂದೀಪ್ ದೇವು ಧರ್ಮಸ್ಥಳ, ಸುರೇಶ್ ಮಾಚಾರು, ಅಭಿಷೇಕ್ ಬೆಳಾಲು ಉಪಸ್ಥಿತರಿದ್ದರು.











