ಪೆರಾಡಿ ಗ್ರಾಮದ ಪಾಡಿ ನಿವಾಸಿ ವಸಂತ್ ಪೂಜಾರಿ(60ವ) ರವರು ಅಸೌಖ್ಯದಿಂದ ಅ. 23 ರಂದು ಸಾವನ್ನಪ್ಪಿದ್ದು ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂದೀಪ್ ರವರ ತಂದೆ ವಸಂತ್ ಪೂಜಾರಿ ರವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಸುಮಾರು 03 ತಿಂಗಳ ಹಿಂದೆ ಮಂಗಳೂರು ಯನೋಪೋಯ ಆಸ್ಪತ್ರೆಯಲ್ಲಿ ಅಂಜಿಯೋಗ್ರಾಫಿ ಚಿಕಿತ್ಸೆ ಪಡೆದಿದ್ದು ತನ್ನ ವಾಸದ ಮನೆಯಾದ ಪೆರಾಡಿ ಗ್ರಾಮದ ಪಾಡಿ ಮನೆಯಲ್ಲಿ ಇದ್ದವರು ಅ.23 ರಂದು ಸಂಜೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರನ್ನು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.











