September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ “ಪರೋಪಕಾರ ಸಪ್ತಾಹ”

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇದರ ಶಾಲಾ ಆವರಣದಲ್ಲಿ ದತ್ತಿ ಸಪ್ತಾಹವನ್ನು ಅ.13 ರಿಂದ 18 ರವರೆಗೆ ಬಹಳ ಉತ್ಸಾಹ ಮತ್ತು ದಯೆಯ ಮನೋಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಶಾಲಾ ಪ್ರಾಂಶುಪಾಲರಾದ ವಂ|ಫಾ ವಿಜಯ್ ಲೋಬೊ ಅವರ ಕನಸಾಗಿದ್ದುಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ವಿದ್ಯಾರ್ಥಿಗಳು ಕರುಣೆಯನ್ನು ತೋರಿಸಲು ಮತ್ತು ಸಹಾಯಹಸ್ತ ಚಾಚಲು ಪ್ರೋತ್ಸಾಹಿಸುತ್ತದೆ.“ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಲ್ಲಿ ಪರೋಪಕಾರ ಮಾಡುವ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಮೂಡಿದರೆ ಮುಂದಕ್ಕೆ ಅವರ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಲು ಖಂಡಿತ ಸಾಧ್ಯವೆಂದು” ಶಾಲಾ ಸಂಚಾಲಕರಾದ ಫಾ| ಅಬೆಲ್ ಲೋಬೊ ಅವರು ಹೇಳಿದರು.

ಪ್ರತಿದಿನ ಬೆಳಿಗ್ಗೆ ವಿದ್ಯಾರ್ಥಿಗಳು ಅಕ್ಕಿ ಬೇಳೆಕಾಳುಗಳು ದವಸ ಧಾನ್ಯಗಳು ದಿನಸಿ ಸಾಮಗ್ರಿಗಳು ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಸ್ತುಗಳನ್ನುಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ, ಸಿಯೋನ್ ಆಶ್ರಮ ಗಂಡಿಬಾಗಿಲು, ದಯಾ ಸ್ಪೆಷಲ್ ಸ್ಕೂಲ್ ಬೆಳ್ತಂಗಡಿ, ನವಚೇತನ ಸ್ಪೆಷಲ್ ಸ್ಕೂಲ್ ವೇಣೂರು, ಅನುಗ್ರಹ ವೃದ್ಧಾಶ್ರಮ ಬೆಳ್ತಂಗಡಿಈ ಸಂಸ್ಥೆಗಳಿಗೆ ವಿತರಿಸಲಾಯಿತು.

ದಾನ ಎಂದರೆ ಕೇವಲ ಹಣವನ್ನು ನೀಡುವುದಲ್ಲ, ಬದಲಿಗೆ ಅಗತ್ಯವಿರುವವರೊಂದಿಗೆ ಪ್ರೀತಿ, ಕಾಳಜಿ ಮತ್ತು ಸಮಯವನ್ನು ಹಂಚಿಕೊಳ್ಳುವುದೆಂದು ಅರ್ಥಮಾಡಿಕೊಳ್ಳಲು ಈ ವಾರ ಎಲ್ಲರಿಗೂ ಸಹಾಯ ಮಾಡಿತು. ಇದು ನಿಜವಾಗಿಯೂ ಅರ್ಥಪೂರ್ಣ ಅನುಭವವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ.

Related posts

ವಾಲಿಬಾಲ್ ಪಂದ್ಯಾಟ: ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ತನುಶ್ರೀ ಶೇ.98.83

Suddi Udaya

ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟ: ಅದ್ವಿಕ ಕೆ.ಪಿ. ರವರಿಗೆ ಚಿನ್ನದ ಪದಕ

Suddi Udaya

ಬಳಂಜ: 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಶ್ರದ್ದಾ ಭಕ್ತಿಯಿಂದ ಗಣಪತಿ ದೇವರ ಆರಾಧನೆ, ಸಾವಿರಾರು ಭಕ್ತರು ಭಾಗಿ

Suddi Udaya

ಆ.22: ಬೆಳ್ತಂಗಡಿಯಲ್ಲಿ ಹೋಟೆಲ್ ಶ್ರೀದೇವಿ ಶುಭಾರಂಭ

Suddi Udaya

ನಡ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಪೂಜಾರಿ ರಾಜೀನಾಮೆ

Suddi Udaya
error: Content is protected !!