ಬೆಳ್ತಂಗಡಿ: ಕಳೆದ ಐದು ದಶಕಗಳಿಂದ ಸಮಾಜಮುಖಿ ಚಿಂತನೆಗಳಿಂದ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೆರವಾ ಸಂಘವು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಂಘವು ವಿದ್ಯೆ ಹಾಗೂ ಸಂಘಟನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳು ತತ್ವ ಸಂದೇಶವನ್ನು ಪಾಲಿಸುತ್ತಾ ಬರುತ್ತಿದೆ.ಕಳೆದೈದು ದಶಕಗಳಿಂದ ಹಲವಾರು ಅಧ್ಯಕ್ಷರುಗಳು ಸಂಘವನ್ನು ಅತ್ಯತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ.
ಸಂಘಕ್ಕೆ ಕೆ.ವಸಂತ ಬಂಗೇರ ಅವರ ಕೊಡುಗೆ ಮಾತ್ರ ಅವಿಸ್ಮರಣೀಯವಾದುದು. ಪ್ರಸ್ತುತ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು,ಕಾರ್ಯದರ್ಶಿ ನಿತೀಶ್ ಕೋಟ್ಯಾನ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ











