July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ಮೂಲ ಸೌಕರ್ಯದಿಂದ ವಂಚಿತವಾಗಿದೆ ಬಂಗಾಡಿ ಅಂಗನವಾಡಿ ಕೇಂದ್ರ: ಸಮಸ್ಯೆಯನ್ನು ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ

ಇಂದಬೆಟ್ಟು: ಇಲ್ಲಿಯ ಬಂಗಾಡಿ 2ನೇ ವಾರ್ಡ್ ನಲ್ಲಿರುವ ರೂ. 16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಅಂಗನವಾಡಿ ಕೇಂದ್ರದಲ್ಲಿ ಪ್ರಾರಂಭದಲ್ಲಿ 20-25 ಮಕ್ಕಳಿದ್ದು, ಈಗ ಇಲ್ಲಿ ಹಲವು ಸಮಯಗಳಿಂದ ಕುಡಿಯಲು ಹಾಗೂ ಶೌಚಾಲಯಕ್ಕೆ ನೀರೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.

ಪಂಚಾಯಿಂದ ಬರುವ ನಳ್ಳಿ ನೀರು ಅಂಗನವಾಡಿ ವರೆಗೆ ತಲುಪುವುದೇ ಇಲ್ಲ, ಮಕ್ಕಳು ಶೌಚಾಲಯವಿದ್ದರು ನೀರಿಲ್ಲದ ಕಾರಣ ಅಂಗನವಾಡಿಯ ಹೊರಗಡೆ ಬರಬೇಕು. ಇದರ ಸುತ್ತಮುತ್ತ ಸರಿಯಾದ ಕಂಪೌಂಡ್ ಇಲ್ಲ. ಬದಿಯಲ್ಲೆ ದೊಡ್ಡ ಹೊಂಡಗಳಿದ್ದು ಮಕ್ಕಳಿಗೆ ಅಪಾಯಕಾರಿಯಾಗಿದೆ. ಸುತ್ತಮುತ್ತ ಗೋಡೆ ಬದಿಯಲ್ಲೆ ಗಿಡ ಗಂಟಿಗಳು ಬೆಳೆದು ಹಾವು, ಹೆಗ್ಗಣಗಳ ವಾಸ ಸ್ಥಳವಾಗಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಪೊಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಈಗ 10-12 ಮಕ್ಕಳಿದ್ದು, ಪೊಷಕರೇ ಬಂದು ಬಕೆಟ್, ಕೊಡಪಾನಗಳಲ್ಲಿ ಹತ್ತಿರದ ಮನೆಗಳಿಂದ ಕುಡಿಯಲು ನೀರು ತರುವಂತಾಗಿದೆ.

ಆದರಿಂದ ಸಂಬಂಧಪಟ್ಟ ಅಧಿಕಾರಿಗಳು, ಮೇಲ್ವಿಚಾರಕರು ಇದರ ಕಡೆ ಗಮನಹರಿಸಿ ಶೀಘ್ರದಲ್ಲಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಾರ್ವಜನಿಕ ಆಗ್ರಹವಾಗಿದೆ.

Related posts

ಸಿರಿ ಸಂಸ್ಥೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಗರ್ಡಾಡಿ : ಪ್ರಗತಿಪರ ಕೃಷಿಕ ಹಾಗೂ ಖ್ಯಾತ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ ನಿಧನ

Suddi Udaya

ಗೇರುಕಟ್ಟೆ: ಮಾನವೀಯತೆ ಮೆರೆದ ಕಳಿಯ ಗ್ರಾ.ಪಂ.ಕಾರ್ಯದರ್ಶಿ ಕುಂಞ ಕೆ., ಕಳಿಯ ಸಿ.ಎಚ್.ಓ. ಮತ್ತು ಸಿಬ್ಬಂದಿ

Suddi Udaya

ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಜಂಟಿ ಸಂಘಟನೆ ವತಿಯಿಂದ ಆಟಿದ ಅಟೀಲ್ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಕಾರು -ಬೈಕ್ ಅಪಘಾತ: ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

Suddi Udaya

ಸೌತಡ್ಕ ದೇವಳದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya
error: Content is protected !!