ಕೊಕ್ಕಡ : ಶ್ರೀ ಕೃಷ್ಣ ಭಜನಾ ಮಂದಿರ ಉಪ್ಪಾರಪಳಿಕೆಯಲ್ಲಿ ಗ್ರಾಮ ವಿಕಾಸ ವತಿಯಿಂದ ದೀಪ ಲಕ್ಷ್ಮಿ ಪೂಜೆ ಕಾರ್ಯಕ್ರಮವು ನ.5 ರಂದು ನಡೆಯಿತು.


ಮುಖ್ಯ ಅತಿಥಿಗಳಾಗಿ ಶ್ರೀ ಸೌತಡ್ಕ ಮಹಾ ಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ ಕೃಷ್ಣ ಭಟ್ ಹಿತ್ತಿಲು ದೀಪ ಬೆಳಗಿಸಿ ಭಾರತಂಬೆಗೆ ಪುಷ್ಪರ್ಚಣೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ತಿಕ ಹುಣ್ಣಿಮೆಯ ಮತ್ತು ದೀಪಾವಳಿ ಹಬ್ಬದ ವಿಶೇಷತೆಯನ್ನು ಬಾಲಕೃಷ್ಣ ಬಳಕ ವಿವರ ನೀಡಿದರು. ಕಾರ್ಯಕ್ರಮವನ್ನು ರಾಜ್ ಮೋಹನ್ ಸಂಘದ ಮುಖ್ಯಸ್ಥರು ನೆರವೇರಿಸಿದರು. ತಿಂಗಳ ಭಜನೆ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಿತು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹೇಮಾ ವಂದಿಸಿದರು.











