25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” — ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್‌ನಿಂದ ಸಿಯೋನ್ ಆಶ್ರಮಕ್ಕೆ ನೆರವು

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಚರ್ಚ್ ತೊಡಂಬಿಲ, ಚರ್ಚ್‌ನ ಧರ್ಮಗುರುಗಳಾದ ವಂದನೀಯ ಅಂತೋನಿ ಲೋಬೊರವರ ಮಾರ್ಗದರ್ಶನದಲ್ಲಿ, ಕಾರ್ಮಿಕ, ಪರಿಸರ ಮತ್ತು ಅಂತರ್ಧರ್ಮೀಯ ಆಯೋಗಗಳ ಸಂಯುಕ್ತ ಪೋಷಕತ್ವದಲ್ಲಿ, “ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” ಎಂಬ ಪರಿಕಲ್ಪನೆಯಡಿ ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲಿನ ಅಸಹಾಯಕರಿಗೆ ಸುಮಾರು ರೂ. 2 ಲಕ್ಷ ಮೌಲ್ಯದ ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ರವರಿಗೆ ಹಸ್ತಾಂತರಿಸಲಾಯಿತು.

ಈ ಉತ್ತಮ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದ ಡಾ. ಯು.ಸಿ. ಪೌಲೋಸ್ ರವರು ಮಾತನಾಡಿ, “ ಅಸಹಾಯಕರಿಗೆ ಹೃದಯಗಳ ಬಾಂಧವ್ಯತೆ ನಿರ್ಮಿಸಲು ಇದು ದಾನಭಾವನೆಯ ಸುಂದರ ನಿದರ್ಶನ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಚರ್ಚ್‌ನ ಪಾಲನಾ ಮಂಡಳಿ ಸದಸ್ಯರು, ವಿವಿಧ ಆಯೋಗ ಸದಸ್ಯರು ಹಾಗೂ ಚರ್ಚ್‌ನ ಭಕ್ತಜನರು ಉಪಸ್ಥಿತರಿದ್ದರು.

Related posts

ದಿ| ವಸಂತ ಬಂಗೇರರ ಮನೆಗೆ ರಾಜ್ಯದ ಮಾಜಿ ಸಚಿವ ಪಿ.ಜಿ. ಆರ್ ಸಿಂಧ್ಯ ಭೇಟಿ

Suddi Udaya

ಉಜಿರೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ರವರ ಪತ್ನಿ ಶ್ರೀಮತಿ ಬಿ. ಸರೋಜಿನಿ ದೇವಿ ನಿಧನ

Suddi Udaya

ಗೇರುಕಟ್ಟೆ: ಕಾರು ಹಾಗೂ ಬೈಕ್ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ವಲಯ ಮಟ್ಟದ ಗೀತ ಗಾಯನ ಸ್ಪರ್ಧೆ :ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಫೆ.3: ಬೆಳ್ತಂಗಡಿ ಆರ್.ಜೆ. ಫ್ರೆಂಡ್ಸ್ ಕ್ಲಬ್ ಕಲ್ಲಗುಡ್ಡೆ ಆಶ್ರಯದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ನೆರಿಯ : ತೋಟತ್ತಾಡಿ, ದಡ್ಡುವಿನಲ್ಲಿ ನೀರಲ್ಲಿ ಸಿಲಿಕಿಕೊಂಡ ಕಾರು

Suddi Udaya
error: Content is protected !!