24 C
ಪುತ್ತೂರು, ಬೆಳ್ತಂಗಡಿ
June 21, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬಿವಿಎಲ್ ವಾಲಿವಾಲ್ ಪಂದ್ಯಾವಳಿ, ಕೋಟ್ಯಾನ್ ರಾಕರ್ಸ್ ಚಾಂಪಿಯನ್, ಇಕೋಪ್ರೇಶ್ ರನ್ನರ್

ಬಳಂಜ: ಬಳಂಜ ವಾಲಿವಾಲ್ ಕ್ಲಬ್ ಸಹಕಾರದೊಂದಿಗೆ,ಕೋಟ್ಯಾನ್ ರಾಕರ್ಸ್ ತಂಡದ ವತಿಯಿಂದ ನ. 8 ರಂದು ನಡೆದ ವಾಲಿಬಾಲ್ ಪಂದ್ಯಾಕೂಟದ ಉದ್ಘಾಟನೆಯನ್ನು ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ನೆರವೇರಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಕೋಟ್ಯಾನ್ ರಾಕರ್ಸ್ ತಂಡದ ಮುಖ್ಯಸ್ಥ ಸಂತೋಷ್ ಪಿ ಕೋಟ್ಯಾನ್, ಶರತ್ ಅಂಚನ್, ರಂಜಿತ್ ಮಜಲಡ್ಡ, ಪ್ರವೀಣ್ ಡಿ ಕೋಟ್ಯಾನ್, ದಿನೇಶ್ ನಿಟ್ಟಡ್ಕ, ಅಶ್ರಫ್, ಬಿವಿಎಲ್ ಕಾರ್ಯದರ್ಶಿ ಯೋಗೀಶ್ ಹಾಗೂ ತಂಡದ ಆಟಗಾರರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಕೋಟ್ಯಾನ್ ರಾಕರ್ಸ್ ತಂಡವು ಸೀಸನ್ 6 ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇಕೋ ಪ್ರೇಶ್ ಎಂಟರ್ಪ್ರೈಸಸ್ ತಂಡವು ರನ್ನರ್ ಆಗಿ ಹೊರಹೊಮ್ಮಿತು.

ವಿಜೇತ ತಂಡದಲ್ಲಿ ಸುರೇಶ್ ಪೂಜಾರಿ ಹೇವ, ಪುರಂದರ ಪೂಜಾರಿ, ನಿಶಾಂತ್, ರಂಜಿತ್ ಪೂಂಜಬೆಟ್ಟು,ಪ್ರವೀಣ್ ಗಾಂದೋಟ್ಟು, ಭಾಸ್ಕರ ಶೆಟ್ಟಿ, ಅನ್ವಿತ್ ಹೇವ, ರಾಜೇಶ್ ಯೈಕುರಿ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಸಾದ್ ವೀಕ್ಷಣಾ ವಿವರಣಾ ಮಾಡಿದರು. ಕೇವನ್ ಹಾಗೂ ತಂಡದವರು ತೀರ್ಪುಗಾರಿಕೆಯಲ್ಲಿ ಸಹಕರಿಸಿದರು.

Related posts

ನಿಡ್ಲೆ : ನೆಕ್ಕರೆ ನಿವಾಸಿ ಧರ್ಣಮ್ಮ ನಿಧನ

Suddi Udaya

ಮಡಂತ್ಯಾರು ಮೆಸ್ಕಾಂ ಕಛೇರಿಯಲ್ಲಿ ಕಂದಾಯ ಅದಾಲತ್‌ ಕಾರ್ಯಕ್ರಮ: ವಿದ್ಯುತ್ ಪರಿವರ್ತಕದ ಬೇಡಿಕೆಗೆ ಮನವಿ

Suddi Udaya

ಮಚ್ಚಿನ ಗ್ರಾ.ಪಂ. ಅಧ್ಯಕ್ಷರಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ಸೋಮಾವತಿ ಆಯ್ಕೆ

Suddi Udaya

ಬೆಳ್ತಂಗಡಿ: ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ

Suddi Udaya

ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಕ್ರೀಡಾಕೂಟ: ನಾವೂರು ಶಾಲೆ ವಿದ್ಯಾರ್ಥಿ ಜೀವಿತ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಜ.22 ರಂದು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹನುಮಾನ್ ಚಾಲಿಸಾ ರಾಮತಾರಕ ಮಂತ್ರ ಹಾಗೂ ಭಜನಾ ಕಾರ್ಯಕ್ರಮ

Suddi Udaya
error: Content is protected !!