23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿರ್ಲಾಲು ನಲ್ಲಿ ಮೂಲ್ಯರ ಯಾನೆ ಕುಲಾಲರ ಸಂಘದಿಂದ ಕೆಸರುಡೊಂಜಿ ದಿನ

ಬೆಳ್ತಂಗಡಿ: ತುಳುನಾಡಿನ ಸಂಸ್ಕತಿ, ಸಂಸ್ಕಾರ ಮತ್ತು ಕ್ರೀಡಿಗಳನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಶಿರ್ಲಾಲು ಕುಲಾಲ ಸಮಾಜ ಬಾಂಧವರು ಕೆಸರುಡೊಂಜಿ ಕ್ರೀಡಾಕೂಟ ಮಾಡುತ್ತಿರುವುದು ಅಭಿನಂದನೀಯ. ಕುಲಾಲ ಸಮುದಾಯ ಹಿಂದಿನಿಂದಲೂ ದೈವ ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಸಮುದಾಯವಾಗಿದೆ ಎಂದು ದಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಹೇಳಿದರು.

ಅವರು ಶಿರ್ಲಾಲು ನಲ್ಲಿ ಮೂಲ್ಯರ ಯಾನೆ ಕುಲಾಲರ ಸಂಘ ಆಯೋಜಿಸಿದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ ಇಂತಹ ಕ್ರೀಡಾ ಕೂಟಗಳು ನಗರಪ್ರದೇಶದಲ್ಲೂ ವಿಸ್ತರಿಸಬೇಕು ಆಗ ನಗರವಾಸಿಗಳಿಗೂ ತುಳುನಾಡ ಕ್ರೀಡೆಯ ಪರಿಚಯವಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಕೆಸರುಡೊಂಜಿ ದಿನ ಕ್ರೀಡಾಕೂಟ ನಡೆಸಬೇಕು ಎಂದರು. ಉದ್ಯಮಿ ಗಣೇಶ್ ಕುಲಾಲ್ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿ ಸಮಾಜಬಾಂಧವರು ಒಟ್ಟಾಗಿ ಸೇರಲು ಇಂತಹ ಕ್ರೀಡಾ ಕೂಟ ಅಗತ್ಯ ಎಂದರು. ಮೂಲ್ಯರ ಯಾನೆ ಕುಲಾಲ ಸಂಘ ಅಳದಂಗಡಿ, ಶಿರ್ಲಾಲು ಇದರ ಅದ್ಯಕ್ಷ ಪ್ರಭಾಕರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಳದಂಗಡಿ ಸಿ ಎ ಬ್ಯಾಂಕ್ ನ ಸತೀಶ್ ಕುಲಾಲ್, ಪ್ರಗತಿಪರ ಕ್ರುಷಿಕ ಮೋಂಟ ಮೂಲ್ಯ, ಶಿರ್ಲಾಲು ಕುಲಾಲ್ ಸಂಘದ ಮಾಜಿ ಅದ್ಯಕ್ಷ ಬಾಲಕೃಷ್ಣ ನೂಜಿಗೆ, ಪ್ರಗತಿಪರ ಕ್ರುಷಿಕ ರಾಮ ಬಂಗೇರ ಕಾಯರೊಟ್ಟು, ಉಪನ್ಯಾಸಕ ಅವಿನಾಶ್ ಕುಲಾಲ್ ಮಾಣಿಲ, ಶಿರ್ಲಾಲ್ ಸಿ ಎ ಬ್ಯಾಂಕ್ ನ ಲೆಕ್ಕಿಗ ರಾಜೇಶ್ ಎನ್ ನೂಜಿಗ, ಉದ್ಯಮಿಗಳಾದ ಬೇಬಿ ಮೂಲ್ಯ ಬೈರೊಟ್ಟು, ಸುರೇಶ್ ಕುಲಾಲ್ ಕಂಬಳದಡ್ಡ, ಪ್ರಗತಿಪರ ಕ್ರುಷಿಕ ಮೋನಪ್ಪ ಮೂಲ್ಯ ನಲ್ಲಾರಗುತ್ತು, ಗುರಿಕಾರ ವಸಂತ ಕುಲಾಲ್ ಕುರೇವೂರು ಉಪಸ್ಥಿತರಿದ್ದರು. ರಾಜೇಶ್ ನೋಜಿಗ ಸ್ವಾಗತಿಸಿ ನಿರೂಪಿಸಿದರು. ಪ್ರಸಾದ್ ನಲ್ಲಾರ ಗುತ್ತು ವಂದಿಸಿದರು. ಸಮಾಜಬಾಂಧವರ ಮಕ್ಕಳಿಗೆ, ಸಾರ್ವಜನಿಕನಿಕರಿಗೆ ವಿವಿಧ ಸ್ಪರ್ದೆಗಳನ್ನು ಅಯೋಜಿಸಲಾಗಿತ್ತು.

Related posts

ಮಚ್ಚಿನ: ಸಂವಿಧಾನ ಜಾಗೃತಿ ಜಾಥ

Suddi Udaya

ಬಡಗಕಾರಂದೂರು ಸ.ಉ.ಪ್ರಾ.ಶಾಲೆಯ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶಾಲಾ ಎಸ್ ಡಿ ಎಂ ಸಿ ವತಿಯಿಂದ ಸಂಸದ ಬ್ರಿಜೇಶ್ ಚೌಟರವರಿಗೆ ಮನವಿ ಸಲ್ಲಿಕೆ

Suddi Udaya

ಬಂದಾರಿನಲ್ಲಿ ಮತ್ತೆ ತೋಟಕ್ಕೆ ನುಗ್ಗಿದ್ದ ಕಾಡಾನೆ: ಕೃಷಿ ಹಾನಿ

Suddi Udaya

ಸೆಂಟ್ ಲಾರೆನ್ಸ್ ಕಥೇಡ್ರಲ್ ಚರ್ಚ್ ವತಿಯಿಂದ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಪ್ತ ಸಹಾಯಕನಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪಟ್ರಮೆ: ಪಟ್ಟೂರು ಪಿತ್ತಿಲ್ತಾರು ನಿವಾಸಿ ಮೋನಪ್ಪ ಎಂ. ಕೆ ನಿಧನ

Suddi Udaya
error: Content is protected !!