22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಹಕಾರ ಸಪ್ತಾಹ ಕಾರ್ಯಕ್ರಮ: ಆರಂಬೋಡಿಯ ಪ್ರತಾಪ್ ಶೆಟ್ಟಿಯವರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ “ಕ್ಷೀರಾರತ್ನ” ಪ್ರಶಸ್ತಿ

ಬೆಳ್ತಂಗಡಿ: ದ.ಕ. ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಆರಂಬೋಡಿಯ ಪ್ರತಾಪ್ ಶೆಟ್ಟಿ ಕುಂಡಾಜೆಯವರಿಗೆ “ಕ್ಷೀರಾರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರತಾಪ್ ಶೆಟ್ಟಿ ಕುಂಡಾಜೆಯವರು ಪ್ರಸ್ತುತ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದು, ಆರಂಬೋಡಿ ಗ್ರಾಮದ ಕುಂಡಾಜೆ ಶ್ರೀಮತಿ ಸುನಂದಾ ಮತ್ತು ಸಂಜೀವ ಶೆಟ್ಟಿ ದಂಪತಿ ಪುತ್ರ.

ಇವರು ಆಟೋಮೋಬೈಲ್ ವೃತ್ತಿ ಶಿಕ್ಷಣ ಪಡೆದಿದ್ದು, ಬೆಂಗಳೂರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅದನ್ನು ತ್ಯಜಿಸಿ ತನ್ನ ಊರಿಗೆ ಮರಳಿ ಕೃಷಿ ಮತ್ತು ಹೈನುಗಾರಿಕೆಯನ್ನು ಪ್ರಾರಂಭಿಸಿ ಪ್ರಸ್ತುತ ಪ್ರತಿ ದಿನಾ ಸರಾಸರಿ 100 ಲೀಟರ್‌ಗಿಂತಲು ಅಧಿಕ ಹಾಲನ್ನು ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪೂರೈಸುತ್ತಿದ್ದಾರೆ.

ಸುಮಾರು 15 ಉತ್ತಮ ಜಾತಿಯ ತಳಿಗಳನ್ನು ಸಾಕುತ್ತಿರುವ ಇವರು ಹೈನುಗಾರಿಕೆಯೊಂದಿಗೆ ಅಡಿಕೆ ಕೃಷಿ, ತೆಂಗು ಕೃಷಿಯನ್ನು ಮಾಡುತ್ತಿದ್ದೂ ಉಳಿದ ಯುವಕರಿಗೆ ಪ್ರತಾಪ್ ಶೆಟ್ಟಿ ಪ್ರೇರಣೆಯಾಗಿದ್ದಾರೆ. ಇವರಿಗೆ ಬೆಂಬಲವಾಗಿ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರುಗಳು ಸಾಥ್ ನೀಡುತ್ತಿದ್ದಾರೆ

Related posts

ಅಲಂಕೃತಗೊಂಡ ಮಚ್ಚಿನ ಶಾಲೆ ಹಾಗೂ ಪುಂಜಾಲಕಟ್ಟೆ ಶಾಲೆಯ ಮತದಾನ ಕೇಂದ್ರದಲ್ಲಿ ಬಿರುಸಿನ ಮತದಾನ

Suddi Udaya

ಉಜಿರೆ ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

Suddi Udaya

ಉಜಿರೆಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ಮೆರವಣಿಗೆ

Suddi Udaya

ಬೆಳ್ತಂಗಡಿ ತಾಲೂಕು ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ ಆಯ್ಕೆ

Suddi Udaya

ಗೇರುಕಟ್ಟೆ : ಪರಪ್ಪು ಜಮಾಅತ್ ನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಎಂ.ಕೆ. ಅಹ್ಮದ್ ಯೂಸುಫ್ ರವರಿಗೆ ಗೌರವಾರ್ಪಣೆ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ರವರಿಗೆ ಮನವಿ

Suddi Udaya
error: Content is protected !!