ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಕುಪೆಟ್ಟಿ, ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಗುಂಡಿಗಳಿಗೆ ತಾತ್ಕಲಿಕ ಪರಿಹಾರ: ಪ್ರಯಾಣಿಕರಿಗೆ ಧೂಳಿನ ಗೋಳು

ಬೆಳ್ತಂಗಡಿ: ಕುಪೆಟ್ಟಿ. ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆ ಕುರಿತು ಸುದ್ದಿ ಉದಯ ವಾರಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಗುಂಡಿಗಳ ದರ್ಬಾರ್ ರಸ್ತೆಗೆ ತಾತ್ಕಲಿಕ ಪರಿಹಾರವಾಗಿ ಜಲ್ಲಿ ಹುಡಿ ಮಿಶ್ರಣದಿಂದ ದೊಡ್ಡ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.

ನ.13 ರಂದು “ವರ್ಷ ಕಳೆದರೂ ಅಭಿವೃದ್ಧಿ ಕಾಣದ ಕುಪ್ಪೆಟ್ಟಿ-ಕಲ್ಲೇರಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ! ಈ ಬಾರಿ ರಸ್ತೆ ಅಭಿವೃದ್ಧಿಯ ಗ್ರಹಣ ಬಿಡುತ್ತಾ ? ಎಂಬ ಶೀರ್ಷಿಕೆಯಡಿ ಸುದ್ದಿ ಉದಯ ವರದಿ ಪ್ರಕಟಿಸಿತ್ತು.” ಪಿಡಬ್ಲೂಡಿ ಇಲಾಖೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ತೇಪೆ ಕಾರ್ಯವು ನಡೆಯಲಿದೆ ಎಂದು ತಿಳಿದು ಬಂದಿದೆ.

ಇದೀಗ ಮತ್ತೆ ಜಲ್ಲಿ ಹುಡಿಗಳಿಂದ ಹೊಂಡ ಮುಚ್ಚತ್ತಿರುವುದರಿಂದ ಧೂಳಿನಿಂದ ಆವೃತ್ತವಾಗಿರುವ ರಸ್ತೆ ಇಕ್ಕೆಲ್ಲೆಗಳು ಸವಾರಿಗೆ ಸಂಕಷ್ಟವಾಗಿ ಕಾಡುತ್ತಿದೆ. ಇನ್ನೂ ಈ ರಸ್ತೆಗೆ ತಾತ್ಕಲಿಕ ಪರಿಹಾರ ಕಂಡುಕೊಳ್ಳವ ಬದಲು ಹೊಸದಾಗಿಯೇ ರಸ್ತೆ ಮಾಡಬೇಕಿದೆ ಎಂಬುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿವರೆಗೆ ನಡೆದಾಡಲು ಹಿಂಜರಿಯುವಷ್ಟು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ರಸ್ತೆ ಮಧ್ಯೆ ಬಾಳೆ ಹಾಗೂ ತೆಂಗಿನ ಗಿಡ, ಕೇಸು ಮತ್ತು ಪಪ್ಪಾಯ ಗಿಡವನ್ನು ನೆಟ್ಟು ನಾಗರಿಕರು ಪ್ರತಿಭಟಿಸಿದ್ದಾರೆ. ನೆಟ್ಟ ಗಿಡಗಳನ್ನು ನ.14 ರಂದು ತೆರವುಗೊಳಿಸಲಾಯಿತು.

Related posts

ಬೆಳ್ತಂಗಡಿ ಪಟ್ಟಣ ಪಂಚಾಯತ್ ಮೀಸಲಾತಿ ಪ್ರಕಟ

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ರಾಣಿಜರಿ ಪರಿಸರದಲ್ಲಿ ಬೆಂಕಿ

Suddi Udaya

ಬಿ.ಸಿ.ರೋಡಿನಲ್ಲಿ ಯುವತಿಯ ಬರ್ಬರ ಹತ್ಯೆ ಖಂಡನೀಯ : ರಕ್ಷಿತ್ ಶಿವರಾಂ

Suddi Udaya

ಕಲ್ಮಂಜ: ಮೃತ್ಯುಂಜಯ-ನೇತ್ರಾವತಿ ನದಿಯ ಸಂಗಮ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಬಳಂಜ: ಗಾಳಿ ಮಳೆಗೆ ಮನೆ ಕುಸಿತ-ಶಾಸಕ ಹರೀಶ್ ಪೂಂಜ ಭೇಟಿ, ಪರಿಹಾರ ದೊರಕಿಸಿ ಕೊಡುವ ಭರವಸೆ

Suddi Udaya

ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ನಿಧಿ ವಿತರಣೆ ಕಾರ್ಯಕ್ರಮ

Suddi Udaya
error: Content is protected !!