25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಕುಪೆಟ್ಟಿ, ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಗುಂಡಿಗಳಿಗೆ ತಾತ್ಕಲಿಕ ಪರಿಹಾರ: ಪ್ರಯಾಣಿಕರಿಗೆ ಧೂಳಿನ ಗೋಳು

ಬೆಳ್ತಂಗಡಿ: ಕುಪೆಟ್ಟಿ. ಕಲ್ಲೇರಿ, ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅವ್ಯವಸ್ಥೆ ಕುರಿತು ಸುದ್ದಿ ಉದಯ ವಾರಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಗುಂಡಿಗಳ ದರ್ಬಾರ್ ರಸ್ತೆಗೆ ತಾತ್ಕಲಿಕ ಪರಿಹಾರವಾಗಿ ಜಲ್ಲಿ ಹುಡಿ ಮಿಶ್ರಣದಿಂದ ದೊಡ್ಡ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ.

ನ.13 ರಂದು “ವರ್ಷ ಕಳೆದರೂ ಅಭಿವೃದ್ಧಿ ಕಾಣದ ಕುಪ್ಪೆಟ್ಟಿ-ಕಲ್ಲೇರಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಸಂಚಕಾರ! ಈ ಬಾರಿ ರಸ್ತೆ ಅಭಿವೃದ್ಧಿಯ ಗ್ರಹಣ ಬಿಡುತ್ತಾ ? ಎಂಬ ಶೀರ್ಷಿಕೆಯಡಿ ಸುದ್ದಿ ಉದಯ ವರದಿ ಪ್ರಕಟಿಸಿತ್ತು.” ಪಿಡಬ್ಲೂಡಿ ಇಲಾಖೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ತೇಪೆ ಕಾರ್ಯವು ನಡೆಯಲಿದೆ ಎಂದು ತಿಳಿದು ಬಂದಿದೆ.

ಇದೀಗ ಮತ್ತೆ ಜಲ್ಲಿ ಹುಡಿಗಳಿಂದ ಹೊಂಡ ಮುಚ್ಚತ್ತಿರುವುದರಿಂದ ಧೂಳಿನಿಂದ ಆವೃತ್ತವಾಗಿರುವ ರಸ್ತೆ ಇಕ್ಕೆಲ್ಲೆಗಳು ಸವಾರಿಗೆ ಸಂಕಷ್ಟವಾಗಿ ಕಾಡುತ್ತಿದೆ. ಇನ್ನೂ ಈ ರಸ್ತೆಗೆ ತಾತ್ಕಲಿಕ ಪರಿಹಾರ ಕಂಡುಕೊಳ್ಳವ ಬದಲು ಹೊಸದಾಗಿಯೇ ರಸ್ತೆ ಮಾಡಬೇಕಿದೆ ಎಂಬುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿವರೆಗೆ ನಡೆದಾಡಲು ಹಿಂಜರಿಯುವಷ್ಟು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಲ್ಲೇರಿ ಸಮೀಪದ ಶಿವಗಿರಿ ಎಂಬಲ್ಲಿ ರಸ್ತೆ ಮಧ್ಯೆ ಬಾಳೆ ಹಾಗೂ ತೆಂಗಿನ ಗಿಡ, ಕೇಸು ಮತ್ತು ಪಪ್ಪಾಯ ಗಿಡವನ್ನು ನೆಟ್ಟು ನಾಗರಿಕರು ಪ್ರತಿಭಟಿಸಿದ್ದಾರೆ. ನೆಟ್ಟ ಗಿಡಗಳನ್ನು ನ.14 ರಂದು ತೆರವುಗೊಳಿಸಲಾಯಿತು.

Related posts

ಎ.17: ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನಾಮಪತ್ರ ಸಲ್ಲಿಕೆ:ಬೆಳ್ತಂಗಡಿ ಕಿನ್ಯಮ್ಮ ಸಭಾ ಭವನದಲ್ಲಿ ಕಾರ್ಯಕರ್ತರ ಸಮಾವೇಶ

Suddi Udaya

ನಾರಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

Suddi Udaya

ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯ ಮದ್ದಡ್ಕ ಬೂತ್ ಸಮಿತಿ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ತೋಟತ್ತಾಡಿ ಎಸ್. ಎನ್. ಡಿ. ಪಿ. ವತಿಯಿಂದ ಸ್ವಾತಂತ್ರ ದಿನ ಆಚರಣೆ

Suddi Udaya

ಎರಡು ವರ್ಷಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು: ಆರೋಪಿ ನೆರಿಯದ ಶರತ್ ಬಂಧನ

Suddi Udaya

ಸೌಜನ್ಯ ಹತ್ಯೆ ಪ್ರಕರಣ: ನೈಜ‌ ಆರೋಪಿಗಳ ಪತ್ತೆ‌‌ ಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡನೆ

Suddi Udaya
error: Content is protected !!