ಮುಂಡಾಜೆ: ಕುಂಟಾಲಪಲ್ಕೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಪಂಚಾಯತ್ ಸದಸ್ಯ ರಾಮಣ್ಣ ಶೆಟ್ಟಿ ಅಗರಿ ನೆರವೇರಿಸಿದರು.
ಶ್ರೀಮತಿ ಶಾಲಿನಿ , ಬಾಲವಿಕಾಸ ಕೇಂದ್ರದ ನೂತನ ಅಧ್ಯಕ್ಷೆ ಶ್ರೀಮತಿ ಮೀನಾ ಉಪಸ್ಥಿತರಿದ್ದರು.
ಮಕ್ಕಳ ಪೋಷಕರು ಮತ್ತು ಮಕ್ಕಳು ಅನೇಕ ಅಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದರು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗಿರಿಜಾ ಸ್ವಾಗತಿಸಿ, ಸಹಾಯಕಿಯರಾದ ವಸಂತಿ ಧನ್ಯವಾದವಿತ್ತರು.











