ಬೆಳ್ತಂಗಡಿ: ಅಟಲ್ ಜನ್ಮ ಶತಾಬ್ದಿ, ಬಿರ್ಸಾ ಮುಂಡಾ 150ನೇ ಜನ್ಮ ವರ್ಷಾಚರಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗುಮಂತ್ ಗತಿವಿಧಿ ಇಂದ ನೆರಿಯ ಗ್ರಾಮದ ಕೋಲೋಡಿ ಪರಿಸರದ ಮಲೆಕುಡಿಯ ಸಮುದಾಯದ ಬಂಧುಗಳ ಸುಮಾರು 75 ಮನೆಗಳಿಗೆ ಕಿಟ್ ನೀಡುವುದರ ಮೂಲಕ ಧಾರ್ಮಿಕ ಮುಖಂಡರು ಯುವ ನಾಯಕರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಬಹಳ ವಿಶಿಷ್ಟವಾಗಿ ಆಚರಿಸಿದರು.



ಊರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ಪ್ರಾರ್ಥನೆ ಮಾಡಿ ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಕಾಲೋನಿಯ ಹಿರಿಯ ಮುಖಂಡರು ಮಂಜಪ್ಪ ಎಮ್ ಕೆ, ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯ ಬಾಬು ಗೌಡ ಪರ್ಪಳ, ಬಿ. ಎಮ್. ಎಸ್ ಜಿಲ್ಲಾ ಅಧ್ಯಕ್ಷರು, ವಕೀಲರಾದ ಅನಿಲ್ ಕುಮಾರ್, ರಾಷ್ಟ್ರೀಯ ಸ್ವಯ ಸೇವಕ ಸಂಘದ ಗುಮಂತ್ ಕಾರ್ಯದ ಮಂಗಳೂರು ವಿಭಾಗ ಸಹ ಸಾಯೋಜಕ್ ಪ್ರಮುಖರಾದ ಸುದರ್ಶನ್ ವಿ ಕನ್ಯಾಡಿ, ಬಿ ಎಮ್ ಎಸ್ ಮಂಗಳೂರು ಜಿಲ್ಲಾ ಸಂಘಟನೆ ಕಾರ್ಯದಸ್ ಕುಮಾರನಾಥ್ ಶೆಟ್ಟಿ, ಸಂಫದ ಪ್ರಮುಖ ಅಕ್ಷಯ್ ಲೋಕಯ್ಯ ಗೌಡ ನೆರಿಯ, ನಿತ್ಯಾನಂದ ಗೌಡ ನೆರಿಯ, ಯುವ ವಕೀಲ ನರೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ನಾವೂರು ಶಕ್ತಿ ಕೇಂದ್ರ ಅಧ್ಯಕ್ಷ ಪ್ರದೀಪ್ ನಾಗಜೆ, ಪೆರ್ಲ ಬಜಾಪ ಮುಖಂಡ ಬಾಲಚಂದ್ರ,ಭರತ್ ಗೌಡ ಕುಪ್ಪೆಟ್ಟಿ, ಪ್ರಜಿತ್ ಕೊಯ್ಯುರು, ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.











