September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಪುಂಜಾಲಕಟ್ಟೆ ಉಳಿ ಯುವಕ ಮಂಡಲದಿಂದ ಭಜನಾ ತರಬೇತಿ ಕಾರ್ಯಗಾರ

ಪುಂಜಾಲಕಟ್ಟೆ ವಲಯದ ಉಳಿ ಯುವಕ ಮಂಡಲ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಕಾರದಿಂದ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇಲ್ಲಿನ ವಿಶ್ವಗೀತಾ ಪರ್ಯಾಯ 2024-2026 ಇದರ ಗೀತೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಟದ ಹಿರಿಯ ಸಂಪನ್ಮೂಲ ವ್ಯಕ್ತಿ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರಿಂದ ಉಳಿ ಯುವಕ ಮಂಡಲದ ಸಭಾಂಗಣದಲ್ಲಿ ಭಜನಾ ತರಬೇತಿ ಕಾರ್ಯಗಾರ ನಡೆಯಿತು.

ತಾಲೂಕಿನ 7 ಭಜನಾ ಮಂಡಳಿಯ ಸುಮಾರು 250 ಭಜಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಜನೆ ಮಂಡಳಿಗಳಿಗೆ ಭಜನೆ ತರಬೇತಿ ನೀಡಲಾಯಿತು. ಈ ತರಬೇತಿ ಕಾರ್ಯಗಾರದಲ್ಲಿ ಶ್ರೀಮತಿ ಸಾವಿತ್ರಿ ಮೇಡಂ, ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ, ಭಜನಾ ಪರಿಷತ್ ನ ಜಿಲ್ಲಾ ಸಮನ್ವಯಧಿಕಾರಿ ಸಂತೋಷ್ ಪಿ ಅಳಿಯೂರು, ಭಜನಾ ತರಬೇತುದಾರರು, ಉಳಿ ಯುವಕ ಮಂಡಲದ ಕಾರ್ಯದರ್ಶಿ ರಾಜ್ ಕುಮಾರ್, ಕೇಂದ್ರ ಒಕ್ಕೂಟದ ಅಧ್ಯಕ್ಷರು ಚಿದಾನಂದ ರೈ ಕಕ್ಯ,ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಸೇವಾಪ್ರತಿನಿಧಿ ಶೇಖರ್ ಉಷಾ ಸುಧಾ ಕುಸುಮ ಹಾಗೂ ಭಜನೆ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


ಸಂತೋಷ್ ಕಾರ್ಯಕ್ರಮದ ನಿರೂಪಿಸಿ, ರಾಜ್ ಕುಮಾರ್ ದನ್ಯವಾದವಿತ್ತರು.

Related posts

ಎಸ್.ಡಿ.ಎಂ ಪ.ಪೂ ಕಾಲೇಜು : ‘ ಪ್ರವೇಶಂ’ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

Suddi Udaya

ಮುಂಡಾಜೆ ಅನುದಾನಿತ ಪ್ರೌಢಶಾಲೆಯ ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಪುಂಜಾಲಕಟ್ಟೆ: ಬೇರ್ಕಳ ಪೆರುವಾರು ಮನೆಯ ಬಾಬು ಶೆಟ್ಟಿ ನಿಧನ

Suddi Udaya

ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಗಾರ

Suddi Udaya

ಕುವೆಟ್ಟು :ಪಯ್ಯೋಟ್ಟು ನಿವಾಸಿ ಡೀಕಯ್ಯ ಮೂಲ್ಯ ನಿಧನ

Suddi Udaya

ಕಲ್ಲೇರಿ ಅಂಗನವಾಡಿ ಕೇಂದ್ರಕ್ಕೆ ಬದಲಿ ವ್ಯವಸ್ಥೆ- ಮತ್ತೆ ಕಾರ್ಯಾರಂಭಗೊಂಡ ಅಂಗನವಾಡಿ ಕೇಂದ್ರ

Suddi Udaya
error: Content is protected !!