23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ರೂ.10 ಲಕ್ಷ ವಿದ್ಯಾರ್ಥಿ ವೇತನ

ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಬೆಂಗಳೂರು ರೋಟರಿ ಇಂದಿರಾ ನಗರ ಸಹಭಾಗಿತ್ವದಲ್ಲಿ ರೂ. 10,80,000/- ವಿದ್ಯಾರ್ಥಿ ವೇತನವನ್ನು, ಬೆಳ್ತಂಗಡಿ ತಾಲೂಕಿನ 270 ಅರ್ಹ ಪಿಯು ವಿದ್ಯಾರ್ಥಿಗಳಿಗೆ ತಲಾ ರೂ 4000/-ದಂತೆ ನೀಡಲಿದೆ.

ಈ 10,80,000/- ಮೊತ್ತದಲ್ಲಿ, ಬೆಂಗಳೂರು ರೋಟರೀ ಇಂದಿರಾ ನಗರದ ಕೊಡುಗೆ 8,10,000/-, ರೋಟರೀ ಕ್ಲಬ್ ಬೆಳ್ತಂಗಡಿ ಕೊಡುಗೆ 1,70,000/-, ಮತ್ತು ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ (ರಿ) ಕೊಡುಗೆ ರೂ. ಒಂದು ಲಕ್ಷ ಇರಲಿದೆ.


ನ.25 ರಂದು ರೋಟರೀ ಭವನದಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭುಗಳು ವಹಿಸಲಿರುವರು. ಉದ್ಘಾಟನೆಯನ್ನು ಬೆಂಗಳೂರು ರೋಟರಿ ಇಂದಿರಾನಗರದ ಮಾಜಿ ಅಧ್ಯಕ್ಷ ರೋ. ಜಗದೀಶ ಮುಗುಳಿ ಮಾಡಲಿರುವರು. ಕೃಷ್ಣ ಪಡ್ವೆಟ್ನಾಯ ಪ್ರತಿಷ್ಠಾನ ಇದರ ಅಧ್ಯಕ್ಷ ಶ್ರೀಧರ ಪಡ್ವೆಟ್ನಾಯ, ರೋಟರಿ ಜಿಲ್ಲೆ 3181 ಇದರ ಮುಂದಿನ ವರ್ಷದ ಜಿಲ್ಲಾಧ್ಯಕ್ಷ ರೊ. ಸತೀಶ್ ಬೋಳಾರರು ಮುಖ್ಯ ಅತಿಥಿಗಳಾಗಿಯೂ, ಉಜಿರೆ ಸಂಧ್ಯಾ ಫ್ರೆಶ್ ಮಾಲಕ ರಾಜೇಶ ಪೈ, ಅಸಿಸ್ಟೆಂಟ್ ಗವರ್ನರ್ ರೊ. ಡಾ ಎ.ಜಯಕುಮಾರ ಶೆಟ್ಟಿ, ವಲಯ ಸೇನಾನಿ ರೊ. ಸುರೇಶ ಸಾಲಿಯಾನ್, ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ ರೋ. ಶ್ರೀಕಾಂತ ಕಾಮತ್, ಸ್ಕಾಲರ್ ಶಿಪ್ ಸಮಿತಿಯ ಚೆಯರ್ ಮ್ಯಾನ್ ರೊ. ಅಬೂಬಕ್ಕರ್ ಯು.ಎಚ್ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ತಮ್ಮ ಪ್ರಕಟಣೆಯಲ್ಲಿ ಪ್ರೊ. ಪ್ರಕಾಶ ಪ್ರಭು ತಿಳಿಸಿದ್ದಾರೆ.

Related posts

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆ ಪದವಿ/ ಪದವಿ ಪೂರ್ವ ವಿಭಾಗದ ಬಾಲಕಿಯರ ಸ್ಥಳೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

Suddi Udaya

ಬಿಜೆಪಿ ಬಜಿರೆ ಗ್ರಾಮದ ಬೂತ್ ಸಂಖ್ಯೆ 140 ರ ಅಧ್ಯಕ್ಷರಾಗಿ ವಸಂತ ಶೆಟ್ಟಿ, ಕಾರ್ಯದರ್ಶಿಯಾಗಿ ಮೋನಪ್ಪ ಗೌಡ ಆಯ್ಕೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆ

Suddi Udaya

ಬಜಿರೆ-ಹೊಸಪಟ್ಣದಲ್ಲಿ ಹೊನಲು ಬೆಳಕಿನ ಪುರುಷರ 60ಕೆ.ಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟ ಉದ್ಘಾಟನೆ

Suddi Udaya

ಮೇಲಂತಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಗಣೇಶೋತ್ಸವ ಆಚರಣೆ: ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಪದಗ್ರಹಣ

Suddi Udaya
error: Content is protected !!