23.5 C
ಪುತ್ತೂರು, ಬೆಳ್ತಂಗಡಿ
March 7, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೆಕೆಂಡರಿ ಶಾಲೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.

ಪ್ರತಿಭಾ ಕಾರಂಜಿ – 2025-26 ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ತಮ್ಮ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ಸಾಧನೆ ಮಾಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗ ಧಾರ್ಮಿಕ ಪಠಣ – ಧ್ರುವ (ಪ್ರಥಮ ಸ್ಥಾನ), ಚಿತ್ರಕಲೆ – ನಿಹಾಲ್ ಆಚಾರ್ಯ (ಪ್ರಥಮ ಸ್ಥಾನ), ದೇಶಭಕ್ತಿ ಗೀತೆ – ಚಾರ್ವಿ (ತೃತೀಯ ಸ್ಥಾನ), ಪಿಕ್ ಅಂಡ್ ಸ್ಪೀಚ್ – ಸಾನ್ವಿ (ತೃತೀಯ ಸ್ಥಾನ), ಇಂಗ್ಲಿಷ್ ಕಂಠಪಾಠ– ಶಮಂತ್ (ತೃತೀಯ ಸ್ಥಾನ),

ಹಿರಿಯ ಪ್ರಾಥಮಿಕ ವಿಭಾಗ ಧಾರ್ಮಿಕ ಪಠಣ (ಸಂಸ್ಕೃತ)– ಅದ್ವಿತಿ ರಾವ್ (ಪ್ರಥಮ ಸ್ಥಾನ), ಇಂಗ್ಲಿಷ್ ಕಂಠಪಾಠ – ವೇದಾಂಶ್ ಚಂದ್ರ ವರ್ಮಾ (ಪ್ರಥಮ ಸ್ಥಾನ), ಭಕ್ತಿಗೀತೆ – ಅಕ್ಷರ್ (ಪ್ರಥಮ ಸ್ಥಾನ), ಚಿತ್ರಕಲೆ – ತನುಷ್ (ಪ್ರಥಮ ಸ್ಥಾನ), ಅಭಿನಯ ಗೀತೆ – ಸಾನ್ವಿ ಎಂ.ಕೆ (ದ್ವಿತೀಯ ಸ್ಥಾನ) , ಪಿಕ್ ಅಂಡ್ ಸ್ಪೀಚ್ – ಅದಿತಿ (ದ್ವಿತೀಯ ಸ್ಥಾನ), ದೇಶಭಕ್ತಿ ಗೀತೆ – ನಿಶಿಕಾ (ದ್ವಿತೀಯ ಸ್ಥಾನ), ಹಿಂದಿ ಕಂಠಪಾಠ– ಅಚಲಾ (ತೃತೀಯ ಸ್ಥಾನ), ಅರೇಬಿಕ್ ಪಠಣ – ಸುಜಾ (ತೃತೀಯ ಸ್ಥಾನ)ಮಣ್ಣಿನ ಮಾಡೆಲ್ – ಕವಿನ್ (ತೃತೀಯ ಸ್ಥಾನ),

ಪ್ರೌಢ ವಿಭಾಗ ಕವ್ವಾಲಿ – ಕವನ ಮತ್ತು ತಂಡ (ಪ್ರಥಮ ಸ್ಥಾನ), ಜನಪದ ನೃತ್ಯ– ಅನ್ವಿತಾ ಮತ್ತು ತಂಡ (ದ್ವಿತೀಯ ಸ್ಥಾನ), ಧಾರ್ಮಿಕ ಪಠಣ (ಸಂಸ್ಕೃತ) – ರವೀಶ್ (ದ್ವಿತೀಯ ಸ್ಥಾನ), ಧಾರ್ಮಿಕ ಪಠಣ (ಅರೇಬಿಕ್) – ಹಲೀಮತ್ ಫಹೀಜಾ (ದ್ವಿತೀಯ ಸ್ಥಾನ), ಸಂಸ್ಕೃತ ಭಾಷಣ – ತನ್ಮಯ ಕೃಷ್ಣ (ದ್ವಿತೀಯ ಸ್ಥಾನ), ಕವನ ವಾಚನ – ಬಿ.ತಸ್ಮಯ್ (ತೃತೀಯ ಸ್ಥಾನ), ಕನ್ನಡ ಭಾಷಣ – ದಿಶಾನ್ (ತೃತೀಯ ಸ್ಥಾನ)

ಕಿರಿಯ ಪ್ರಾಥಮಿಕ ವಿಭಾಗದ 2 ವಿದ್ಯಾರ್ಥಿಗಳು, ಹಿರಿಯ ಪ್ರಾಥಮಿಕ ವಿಭಾಗದ 4 ವಿದ್ಯಾರ್ಥಿಗಳು ಹಾಗೂ ಪ್ರೌಢ ಶಾಲೆಯ 3 ವಿದ್ಯಾರ್ಥಿಗಳು, ಕವ್ವಾಲಿ ತಂಡದ 6 ವಿದ್ಯಾರ್ಥಿಗಳು ಹಾಗೂ ಜಾನಪದ ನೃತ್ಯದ 9 ವಿದ್ಯಾರ್ಥಿಗಳು
ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Related posts

ಪ್ರಯಾಗ್‌ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ

Suddi Udaya

ಭಾರತ -ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್: ಭಾರತದ ಗೆಲುವಿಗಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಜ.7: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂತ್ರರೋಗ ತಪಾಸಣಾ ಶಿಬಿರ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣ ಹಾಗೂ ಬಂದೂಕು ಪತ್ತೆ ಪ್ರಕರಣ : ಇಂದು ಹೈಕೋರ್ಟ್ ನಲ್ಲಿ ವಿಚಾರಣೆ

Suddi Udaya

ಡಿ.13ರಂದು ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಆಪರೇಷನ್ ಸಿಂಧೂರ: ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ

Suddi Udaya
error: Content is protected !!