July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಉಜಿರೆ ವಿದ್ಯುತ್ ಕಂಬಗಳ ಸ್ವಚ್ಚತಾ ಶ್ರಮದಾನ

ಬೆಳ್ತಂಗಡಿ: ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ರಾಜ್ಯದಾದ್ಯಂತ ನ.25 ರಂದು ವಿವಿಧ ರೀತಿಯ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇಂದು ಉಜಿರೆ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಸ್ವಚ್ಚತಾ ಶ್ರಮದಾನಕ್ಕೆ ಚಾಲನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ಎಸ್.ಎಸ್ ರವರು ನೀಡಿದರು.

ಉಜಿರೆ ಗ್ರಾಮ ಪಂಚಾಯತಿ, ವಿದ್ಯುತ್ ಪ್ರಸರಣ ನಿಗಮ, ಸ್ಥಳೀಯರ‌ ಸಹಕಾರ ದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಂಬಗಳ ಸ್ವಚ್ಚತೆ ನಡೆಸಿದರು.

ಕಳೆದ ಎರಡು ವರ್ಷಗಳ ಹಿಂದೆ ಅಳವಡಿಸಿದ್ದ 160 ಕಂಬಗಳು ಮಳೆಯ ನೀರಿನಿಂದ ಪಾಚಿಗಟ್ಟಿದ್ದು ಕಪ್ಪಾಗಿದ್ದವು. ಇದನ್ನು ಶುಚಿಗೊಳಿಸಬೇಕೆಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ರವರು ಶೌರ್ಯ ತಂಡಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ನೀರು ಸಿಂಪಡಣೆ ಮಾಡಿ ಸೋಪ್ ಆಯಿಲ್ ಬಳಸಿ, ಕ್ರೇನ್ ಬಳಕೆ ಮಾಡಿಕೊಂಡು ಎತ್ತರದ ಕಂಬಗಳ ಸ್ವಚ್ಚತೆ ಮಾಡಲಾಯಿತು.

ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ರಾದ ವಿವೇಕ್ ವಿ. ಪಾಯ್ಸ ರವರು ಉಪಸ್ಥಿತರಿದ್ದು ರಾಜ್ಯದ 91 ತಾಲ್ಲೂಕು ಗಳಲ್ಲಿ ಶೌರ್ಯ ತಂಡದಿಂದ ದೇವಸ್ಥಾನ ಸ್ವಚ್ಚತೆ, ಬಡ ಕುಟುಂಬದ ಮನೆ ರಿಪೇರಿ, ರಸ್ತೆ ರಿಪೇರಿ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಪೂಜ್ಯರ ಹುಟ್ಟು ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಈ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಕಿಶೋರ್ ಕುಮಾರ್, ಮಾಧವ ಗೌಡ, ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋಧರ ಉಪಸ್ಥಿತರಿದ್ದರು. ಸಂಯೋಜಕರಾದ ವಸಂತಿ, ಪ್ರೇಮಲತಾ, ಪ್ರಮೀಳಾ ಸಹಕಾರ ನೀಡಿದರು.

ಸ್ವಯಂಸೇವಕರಾದ ರವೀಂದ್ರ, ಉಜಿರೆ, ಸಂತೋಷ ಗೌಡ, ಉಜಿರೆ, ಸಂತೋಷ ಬೆಳಾಲು, ಅವಿನಾಶ್, ಅರಸಿನಮಕ್ಕಿ, ರಮೇಶ್, ಶಿಶಿಲ, ಸಂದೇಶ್, ಉಜಿರೆ, ರಾಘವೇಂದ್ರ, ಉಜಿರೆ, ಸುಧೀರ್ ಉಜಿರೆ, ಅನಿಲ್ ಉಜಿರೆ, ಸಚಿನ್ ಬಿಡೆ ಉಜಿರೆ, ಹರೀಶ್ ನಡ ಕನ್ಯಾಡಿ, ಮಂಜುನಾಥ ನಡ ಕನ್ಯಾಡಿ, ಒಲ್ವಿನ್, ನಡ ಕನ್ಯಾಡಿ, ಜಯರಾಮ ನಡ ಕನ್ಯಾಡಿ, ಅರ್ವಿನ್ ನಡ ಕನ್ಯಾಡಿ, ಸುರೇಶ್ ನಡ ಕನ್ಯಾಡಿ, ಸತೀಶ್ ನೆರಿಯ, ಲೋಕೇಶ್ ಮುಂಡಾಜೆ, ಸುರೇಶ ಮುಂಡಾಜೆ, ರವೀಂದ್ರ ಮುಂಡಾಜೆ, ವಿಶ್ವನಾಥ ಮುಂಡಾಜೆ, ರಾಜೇಶ್ ಮುಂಡಾಜೆ, ಮಂಜುನಾಥ ಉಜಿರೆ, ರತ್ನಾಕರ್ ಉಜಿರೆ ಭಾಗವಹಿಸಿದರು.

    Related posts

    ಬೆಳ್ತಂಗಡಿ ನ.ಪಂ. ವ್ಯಾಪ್ತಿಯ ಮಾಡ್ಯಾಲೋಟ್ಟುನಲ್ಲಿ ರಸ್ತೆಗೆ ಗುಡ್ಡ ಕುಸಿತ

    Suddi Udaya

    ಸೌತಡ್ಕ : ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷ

    Suddi Udaya

    ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬೆಂಗಳೂರು ಭುವನೇಶ್ವರಿ ಕ್ಯಾಟರರ್ಸ್ ಜೆಬಿಆರ್ ಎಂಟರ್ ಪ್ರೈಶಸ್ ರವರಿಂದ ದೇವರಿಗೆ ವಿಶೇಷ ಹೂವಿನ ಅಲಂಕಾರ

    Suddi Udaya

    ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

    Suddi Udaya

    ಇಂದಬೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

    Suddi Udaya

    ಉಜಿರೆ ಎಸ್‌.ಡಿ‌.ಎಂ ಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೋಭಾ ಪಿ ಜೀವಂದರ್ ರವರಿಗೆ ಪಿ.ಎಚ್.ಡಿ ಪದವಿ

    Suddi Udaya
    error: Content is protected !!