September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ ಶ್ರೀರಾಮ ಸಂಸ್ಥಾನಮ್‌ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಹರಿದ್ವಾರದ ಸಾಧನಾ ಕುಟೀರದ 9ನೇ ವಾರ್ಷಿಕೋತ್ಸವ

ಹರಿದ್ವಾರ: ದೇಶದ ಸುಭಿಕ್ಷತೆಗೆ ಸಂತ- ಮಹಂತರ ಪ್ರಯತ್ನವೂ ಅಗತ್ಯ. ಸ್ವಸ್ಥ ಸಮಾಜದ ಗುರಿಗೆ ನಾವೆಲ್ಲರೂ ಕಟೀ ಬದ್ಧರಾಗೋಣ ಎಂದು ೧೦೦೮ ಮಹಾಮಂಡಲೇಶ್ವರ ಕನ್ಯಾಡಿ ಶ್ರೀರಾಮ ಸಂಸ್ಥಾನಮ್‌ನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಹರಿದ್ವಾರದ ಭೂಪತ್‌ವಾಲಾದಲ್ಲಿರುವ ತಮ್ಮ ಸಾಧನಾ ಕುಟೀರ(ಮಠ)ದ ೯ನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಮಹಂತರಾದ ವಿದ್ಯಾನಂದ ಸರಸ್ವತೀ ಮಹಾರಾಜ್, ಮಹೇಶ್‌ಪುರಿಜೀ, ಲಲಿತಾನಂದ ಗಿರೀಜೀ ಮಹಾರಾಜ್, ಹರಿಚೇತನಾಂದಜೀ ಮಹಾರಾಜ್, ಇಂದ್ರಾನಂದ ಸರಸ್ವತೀ ಮಹಾರಾಜ್, ಗಗನದೇವ ಮಹಾರಾಜ್, ಸಹಜಾನಂದ ಸರಸ್ವತೀ ಮಹಾರಾಜ್, ಧೀರೇಂದ್ರ ಪುರಿ ಮಹಾರಾಜ್ ವಿರಾಜಮಾನರಾಗಿದ್ದರು.

ಮಹಂತ ದೇವಾನಂದ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು.

ಉತ್ತರಾಖಂಡದ ಶಾಸಕ, ಬಿಜೆಪಿ ಮಾಜಿ ಅಧ್ಯಕ್ಷ ಮದನ್ ಕೌಶಿಕ್, ಶಾಸಕರಾದ ಹರೀಶ್ ಪೂಂಜ, ಭೀಮಣ್ಣ ನಾಯಿಕ, ಬೆಹರಿನ್ ಶ್ರೀರಾಮ ಕ್ಷೇತ್ರ ಸಮಿತಿ ಅಧ್ಯಕ್ಷ, ಜಯಶಂಕರ್ ವಿಶ್ವನಾಥ್, ಗಲ್ಫ್ ಫೌಂಡೇಶನ್ ಅಧ್ಯಕ್ಷ ಹರೀಶ್ ಪೂಜಾರಿ,ರಾಜ್ಯದ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಉದ್ಯಮಿಗಳಾದ ಬಾಬು ಪೂಜಾರಿ, ಕಿರಣ್‌ಚಂದ್ರ ಪುಷ್ಪಗಿರಿ, ಕಿರಣ್‌ಕುಮಾರ್ ಕೊಡಿಕಲ್, ಅನಿರುದ್ಧ ಭಾಟಿಯಾ, ಬೆಳ್ತಂಗಡಿಯ ಸಂತೋಷ್ ಕುಮಾರ್ ಕಾಪಿನಡ್ಕ. ಸೀತಾರಾಮ ಬೆಳಾಲು, ರವೀಂದ್ರ ಪೂಜಾರಿ ಆರ್ಲ, ದ.ಕ.ಉಡುಪಿ, ಉ.ಕ.ದಿಂದ ೧೫೦ ಕ್ಕೂ ಹೆಚ್ಚು ಶ್ರೀಗಳ ಶಿಷ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೌರೀಶಂಕರ್ ಕಾರ್ಯಕ್ರಮ ನಿರ್ವಹಿಸಿದರು.

Related posts

ದಯಾ ಸ್ಪೆಷಲ್ ಸ್ಕೂಲ್‌ನಲ್ಲಿ ಶಾಲಾ ಪುನರಾರಂಭ ಸಂಭ್ರಮ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆರಂಬೋಡಿ ಕಿ. ಪ್ರಾ. ಶಾಲೆಗೆ ಬಟ್ಟಲು ಮತ್ತು ಗ್ಯಾಸ್ ಸ್ಟವ್ ವಿತರಣೆ

Suddi Udaya

ಚಾರ್ಮಾಡಿ: ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ  ಕೃಷಿ ನಾಶ

Suddi Udaya

ಅ28-ನ.3: ಕೊಕ್ಕಡದಲ್ಲಿ 69ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

Suddi Udaya

ಬೆಳ್ತಂಗಡಿ : ಪಿ. ಡೀಕಯ್ಯ ಚಳುವಳಿಯ ಹೆಜ್ಜೆ ಗುರುತುಗಳು-ಒಂದು ಸ್ಮರಣೆ’ ಕಾರ್ಯಕ್ರಮ

Suddi Udaya

ಪಟ್ರಮೆ: ಕೀಟನಾಶಕ ಸೇವಿಸಿ ಯುವಕ ಆತ್ಮಹತ್ಯೆ

Suddi Udaya
error: Content is protected !!