September 6, 2026
ತಾಲೂಕು ಸುದ್ದಿವರದಿ

ಮುಂಡಾಜೆ: ಬಂಟರ ಸಂಘದ ಸಹಯೋಗದಲ್ಲಿ ಮನೆ ನಿರ್ಮಾಣಕ್ಕೆ ಸಹಕಾರ

ಮುಂಡಾಜೆ: ಬಂಟರ ಗ್ರಾಮ ಸಮಿತಿ ಮುಂಡಾಜೆ, ಬಂಟರ ವಲಯ ಸಮಿತಿ ಉಜಿರೆ , ಬಂಟರ ಯಾನೆ ನಾಡವರ ಸಂಘ, ಬೆಳ್ತಂಗಡಿ ಮತ್ತು ಸ್ಪಂದನ ಸೇವಾ ತಂಡ ಬೆಳ್ತಂಗಡಿ ಇವರುಗಳ ಸಹಾಯ ಹಸ್ತದೊಂದಿಗೆ ಮುಂಡಾಜೆ ಗ್ರಾಮ ಸಮಿತಿಗೆ ಒಳಪಟ್ಟ ಶೇಷಪ್ಪ ಗುಣವತಿ ಶೆಟ್ಟಿ ಇವರಿಗೆ ಮನೆ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ , ನ.27 ರಂದು ಮನೆಯ ಗ್ರಹಪ್ರವೇಶ ನಡೆಯಿತು.

ಮನೆ ನಿರ್ಮಾಣದಲ್ಲಿ ಕೈಜೋಡಿಸಿದ ಗಣ್ಯರಾದ ಸ್ಪಂದನ ಸೇವಾ ತಂಡದ ಅಧ್ಯಕ್ಷ ಹಾಗೂ ಬೆಳ್ತಂಗಡಿ ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಜಿರೆ ವಲಯದ ಅಧ್ಯಕ್ಷರಾದ ವನಿತಾ ಶೆಟ್ಟಿ, ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಳಂಜ, ಗಂಗಾಧರ ರೈ ಉಜಿರೆ, ಕೊಡುಗೈದಾನಿ ಕಂಟ್ರಾಕ್ಟ್ ದಾರರಾದ ಶರತ್ ಮಂಗಳೂರು ಇವರನ್ನು ನ.26 ರಂದು ಮುಂಡಾಜೆ ಬಂಟರ ಗ್ರಾಮ ಸಮಿತಿ ವತಿಯಿಂದ ಅತಿಥೇಯ ಮನೆಯಲ್ಲಿ ನಡೆಸಿದ ಸರಳ ಸಮಾರಂಭದಲ್ಲಿ ಗೌರವಿಸಲಾಯಿತು.

ಮುಖ್ಯ ಆರ್ಥಿಕ ಸಹಕಾರ ನೀಡಿದ ಪ್ರಶಾಂತ್ ಶೆಟ್ಟಿ ಮೂಡಯೂರು, ಉಮೇಶ್ ಶೆಟ್ಟಿ ದುರ್ಗಾ ನಿಲಯ ಉಜಿರೆ, ಸದಾನಂದ ಶೆಟ್ಟಿ, ಸುಮುಖ ಸುಪಾರಿ ಟ್ರೇಡರ್ಸ್ ಬೆಳ್ತಂಗಡಿ, ಕಾರ್ತಿಕ್ ಶೆಟ್ಟಿ ಕಾನರ್ಪ ಮನೆ ಮುಂಡಾಜೆ ,ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಇವರುಗಳ ಸಾಮಾಜಿಕ ಕಳಕಳಿ ಹಾಗೂ ಪ್ರಯತ್ನವನ್ನು ಸ್ಮರಿಸಿಕೊಳ್ಳಲಾಯಿತು.

ವೇದಿಕೆಯಲ್ಲಿ ಮುಂಡಾಜೆ ಗ್ರಾಮ ಸಮಿತಿ ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಅಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ, ಗೌರವ ಸಲಹೆಗಾರ ಪುರುಷೋತ್ತಮ ಶೆಟ್ಟಿ ಅಗರಿ, ಉಪಸ್ಥಿತರಿದ್ದರು. ತನು ಮನ ಧನ ಸಹಕಾರ ನೀಡಿದ ಮುಂಡಾಜೆ ಗ್ರಾಮ ಸಮಿತಿಯ ಎಲ್ಲಾ ಬಂಧುಗಳು ಮತ್ತು ಉಜಿರೆ ವಲಯದ ಎಲ್ಲಾ ಬಂಧುಗಳಿಗೆ ಕೃತಜ್ಞತೆ ಸಮರ್ಪಿಸಲಾಯಿತು. ಮುಂಡಾಜೆ ಗ್ರಾಮ ಸಮಿತಿಯ ಪರವಾಗಿ ಪುಷ್ಪರಾಜ ರೈ ಕಲ್ಲ ಹಿತ್ತಿಲು, ಕೋಶಾಧಿಕಾರಿ ಮಧು ಶೆಟ್ಟಿ ಹುರ್ತಾಜೆ, ಶಿವರಾಜ್ ರೈ ಸೋಮಂತಡ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀತ್ ಶೆಟ್ಟಿ ನೈಯಾಲು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ತಾಲೂಕು ಮಟ್ಟದ ಅಥ್ಲೆಟಿಕ್ಸ್ ನಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳಾಲು ಶ್ರೀ ಮಾಯ ಮಹೇಶ್ವರ ದೇವಸ್ಥಾನದ ನಾಗಬನದಲ್ಲಿ ವಿಶೇಷ ಪೂಜೆ

Suddi Udaya

ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿಯವರ ಮನೆಗೆ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಭೇಟಿ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಜ.24: ಬೆಳ್ತಂಗಡಿಯಲ್ಲಿ “ಬಪ್ಪನಾಡು ಕ್ಷೇತ್ರ ಮಹಾತ್ಮೆ” ಯಕ್ಷಗಾನ ಬಯಲಾಟ

Suddi Udaya

ಜೂ. 3: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಉಚಿತ ಪ್ರದರ್ಶನ

Suddi Udaya
error: Content is protected !!