22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಬೆಳ್ತಂಗಡಿ: ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ, ಸಂಸ್ಥೆಯ ವಿದ್ಯಾರ್ಥಿಗಳು ಅಕ್ಟೋಬರ್ 2025 ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ II, IV, VI ಮತ್ತು VIII ಸೆಮಿಸ್ಟರ್ ಪರೀಕ್ಷೆಗಳಲ್ಲಿ ಶ್ಲಾಘನೀಯ ಸಾಧನೆ ಮಾಡಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದರಲ್ಲಿ ವಿಶೇಷವಾಗಿ VIII ಸೆಮಿಸ್ಟರ್ ವಿದ್ಯಾರ್ಥಿಗಳು – ಕಾಲೇಜಿನ ಮೊದಲ ಔಟ್ಗೋಯಿಂಗ್ ಬ್ಯಾಚ್ — ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದು ಪ್ರಶಂಸನೀಯ.

ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಅಂಜಲಿ (೯೧.೭%), ತೃಪ್ತಿ(೮೮.೬% ), ಕೀರ್ತಿ (೮೬.೨%), ಮತ್ತು ನಾಲ್ಕನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಶರಣ್ಯಾ ಎಸ್ (೮೫%), ಪ್ರಿಯಾ (೮೪.೩%), ಖತೀಜತುಲ್ ಮುನ್ಹಾಝ (೮೨.೧%), ಆರನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಅಮೃತಾ ಕೆ (೮೪.೭%), ಸುಶ್ಮಿತಾ (೮೪.೭%), ಜಯಶ್ರೀ ಬಿ (೮೨.೭%), ಚಂದನಾ ಎಸ್ (೮೨%), ಎಂಟನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಖತೀಜತುಲ್ ಮೌಸೀರ (೮೫.೫%), ಕೇಶಿನಿ (೮೪.೫%), ದಿಯಾ ಅನ್ಝಿಟ (೮೩.೬%), ಫಾತಿಮಾ ತಫೀಮಾ (೮೩.೬%) ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಫಾತಿಮತುಲ್ ಮಿಸ್ರಿಯಾ (೮೫.೫%), ನಿಹಾಲಾ (೮೧.೭%), ಪವಿತ್ರಾ ಸಂಗಪ್ಪ (೮೧.೪%), ಭಾಗ್ಯಶ್ರೀ (೮೦.೩%), ಮಾಜಿದಾ (೮೦%), ಸ್ಮಿತನ್ ಬಿ.ಆರ್ (೭೯%), ಕಾರುಣ್ಯಶ್ರೀ (೭೮.೬%), ನಿಶ್ಮಿತಾ (೭೮.೩%), ಕೀರ್ತನಾ (೭೬.೯%), ನಫೀಸತ್ ಸಜಿಧಾ (೭೬.೬%), ಭಾರ್ಗವ್ ಶಂಕರ ನಾಯಕ್ (೭೬.೨%), ಝೈನಬಾ ಝೈಮಾ (೭೫.೫%), ನಾಲ್ಕನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ರೂಪೇಶ್ (೮೦%), ಸಯ್ಯದ್ ಅನ್ವರ್ (೭೮%), ವಿದ್ಯಾ ಎಸ್ (೭೮%), ಫಾತಿಮಾ ಅಶ್ರೀನಾ (೭೭.೯%), ಪಾತ್ರ ಶುಮಿತಾ (೭೭.೯%), ಚಂದನಾ (೭೫.೭%), ಅಬೆಲ್ ಜೋಸೆಫ್ (೭೫%), ಆರನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಜಲಜಾಕ್ಷಿ (೮೧.೩%), ಭಾನುನಂದನ್ (೮೦.೭%), ಕಿರಣ್ ಎಸ್ (೮೦.೭%), ಸಲ್ಮಾ ಬಾನು (೭೯.೩%), ಪ್ರತಿಭಾ (೭೯.೩%), ಅಮೀನತುಲ್ ರಿಮ್ಶಾ (೭೮.೭%), ಫಾತಿಮತ್ ಶಬೀಬಾ (೭೮.೭%), ಧನ್ಯಾಶ್ರೀ ಎನ್ (೭೮%), ಮೇಘಾಬಾಯಿ ಪಿ ಎಮ್ (೭೮%), ಶಶಾಂಕ್ ಕೆ (೭೮%), ಆಶಿತಾ (೭೬%), ಆಯೇಶಾ ಝೋಹಾ (೭೫.೩%), ಶಾಶ್ವತ್ ಎನ್ ಪಿ (೭೫.೩%), ಎಂಟನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಶಿವಯೋಗಿ ಗುರುಪುತ್ರ ಅಲೆನವರ್ (೮೨.೭%), ಸಮೀಮ್ (೮೦.೯%), ಅಭಿನವ ಕೃಷ್ಣ (೮೦%), ಯಶ್ವಂತ್ ಜಿ ಟಿ (೮೦%), ಕಾರ್ತಿಕ್ ಎಂ (೭೭.೩%), ನವೀನ್ ಕುಮಾರ್ (೭೫.೫%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ.

“ಈ ಮೊದಲ ಔಟ್ಗೋಯಿಂಗ್ ಬ್ಯಾಚ್ನ ಸಾಧನೆ ನಮ್ಮ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ”. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ. ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ.

Related posts

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಕೈಯಿಂದ ಕಾರಿನ ಗಾಜು ಒಡೆದ ವಿವಾದ – ಐವರ‌ ವಿಚಾರಣೆ ಪರಸ್ಪರ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿಯಲ್ಲಿ ಲಯನ್ಸ್ ಯಕ್ಷೋತ್ಸವ: ಧರ್ಮಸ್ಥಳ ಮೇಳದ ಹಿರಿಯ ಕಲಾವಿದರು ಮತ್ತು ಸಿಬ್ಬಂದಿಗಳಿಗೆ ಗೌರವ

Suddi Udaya

ಸೂಳಬೆಟ್ಟು ಸ.ಕಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉದ್ಯಮಿ ರವೀಂದ್ರ ಪೂಜಾರಿ ಆರ್ಲರಿಂದ 6 ಛತ್ರ ಛಾಮರ ಸಮರ್ಪಣೆ

Suddi Udaya

ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ರಂಗ ಮಂದಿರ ನಿರ್ಮಾಣಕ್ಕೆ ಅನುದಾನಕ್ಕೆ ಮನವಿ

Suddi Udaya

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ: ನೂತನ ಆಯುಕ್ತರಾಗಿ ಮಹೇಶ್ ಚಂದ್ರ ನೇಮಕ

Suddi Udaya
error: Content is protected !!