ಬೆಳ್ತಂಗಡಿ ಮಹಿಳಾ ವೃಂದ ಇವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ವೇದಿಕೆಯಲ್ಲಿ ವೃಂದದ ಅಧ್ಯಕ್ಷೆ ಶ್ರೀಮತಿ ರಜನಿ ಎ , ಕಾರ್ಯದರ್ಶಿ ಶ್ರೀಮತಿ ಲಾವಣ್ಯ ಹೊಳ್ಳ , ಅಸ್ಕಿಯಾ ಆರಾ , ಅಧ್ಯಕ್ಷೆ – ಸ್ತವ್ಯ ಆರ್ ಶೆಟ್ಟಿ, ನಿರೂಪಕಿ ಗಣ್ಯಶ್ರೀ ಹಾಗೂ ರೇಷ್ಮಾ ಕೆ. ಎಸ್ ಮತ್ತು ಸೇವಂತಿ ಆರ್ ಉಪಸ್ಥಿತರಿದ್ದರು.
ಶ್ರೀಮತಿ ಸುಮತಿ ಪ್ರಮೋದ್ ಸ್ವಾಗತ ಮತ್ತು ಪ್ರಾಸ್ತವಿಕ ಭಾಷಣ ಮಾಡಿದರು. ರಶ್ಮಿಪಟವರ್ಧನ್ ಇತರ ಚಟುವಟಿಕೆಗಳ ನಿರೂಪಕಿಯಾಗಿಯೂ, ಶ್ರೀಮತಿ ಆಶಾ ಸತೀಶ ಆಟೋಟ ಸ್ಪರ್ಧೆಗಳನ್ನು ನಿರ್ವಹಿಸಿದರು. ವೃಂದದ ಅಧ್ಯಕ್ಷೆಯವರು ಮಕ್ಕಳಿಗೆ ಲಘುವಾಗಿ ಹಿತವಚನ ನೀಡಿದರು. ತೀರ್ಪುಗಾರರು ಮಕ್ಕಳಿಗೆ ಶಿಸ್ತಿನ ಕಾಳಜಿಯ ಬಗ್ಗೆ ಮಾತನಾಡಿದರು . ವೃಂದದ ಕಾರ್ಯದರ್ಶಿ ಧನ್ಯವಾದವಿತ್ತರು.











