ಬಳ್ಳಮಂಜ: ಬಳ್ಳಮಂಜ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳದ ಉದ್ಘಾಟನೆಯನ್ನು ಮಂಗಳೂರು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ ಮೂರ್ತಿ ಮಡವು ನೆರವೇರಿಸಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿ ಅಧ್ಯಕ್ಷ, ದೇವಾಲಯದ ಆಡಳಿತ ಮೊಕ್ತೇಸರ ಡಾ. ಎಂ ಹರ್ಷ ಸಂಪಿಗೆತ್ತಾಯ, ಮುಖ್ಯ ಅತಿಥಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜ್ ಪ್ರಾಂಶುಪಾಲ ಅಲೆಕ್ಸ್ ಐವನ್ ಡಿಸೋಜ, ಬೆಂಗಳೂರು ಯುವ ವಿದ್ಯಮಿ ಆಕಾಶ್ ಕುಲಾಲ್ ಮಾಣೂರು, ನ್ಯಾಯವಾದಿಗಳಾದ ಬದರಿನಾಥ ಸಂಪಿಗೆತ್ತಾಯ, ಪದ್ಮನಾಭ ಸುವರ್ಣ, ವಸಂತ ಮರಕಡ, ಸುಧೀರ್ ಶೆಟ್ಟಿ ಕೋರಬೆಟ್ಟು, ಚಂದ್ರಕಾಂತ ನಿಡ್ಡಾಜೆ, ನಾರಾಯಣ ಪೂಜಾರಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.













