22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.13: ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದ ಬಲಿ ಉತ್ಸವ

ಗುರುವಾಯನಕೆರೆ: ಕುವೆಟ್ಟು ಗ್ರಾಮ ಗುರುವಾಯನಕೆರೆ ಪಿಲಿಚಾಮುಂಡಿ ಕಲ್ಲಿನಲ್ಲಿ ದೊಂಪದಬಲಿ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವವು ಡಿ.13 ರಂದು ಸಂಜೆ 6ರಿಂದ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಶಿವಾಜಿರಾವ್ ಗದ್ದೆಮನೆ ಅವರು ತಿಳಿಸಿದ್ದಾರೆ.


ಅಂದು ಸಂಜೆ 5ಕ್ಕೆ ಪಾಡ್ಯಾರುಬೀಡು ಮನೆಯಿಂದ ಭವ್ಯವಾದ ಮೆರವಣಿಗೆಯಲ್ಲಿ ದೈವದ ಭಂಡಾರವನ್ನು ಪಿಲಿಚಾಮುಂಡಿ ಕಲ್ಲಿಗೆ ತರಲಾಗುವುದು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಯ ಬಳಿಕ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಸಮಿತಿಯ ಗೌರವಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಅಜ್ರಿ ಅನುವಂಶೀಯ ಆಡಳಿತದಾರರು ಪಾಡ್ಯಾರುಬೀಡು, ಶ್ರೀನಿವಾಸ ಅಸ್ರಣ್ಣರು ಮೂಡುಮನೆ, ಎ. ರಾಜಶೇಖರ ಶೆಟ್ಟಿ ಚಾವಡಿ ನಾಯಕರು ಅಳದಂಗಡಿ ಅರಮನೆ, ವಿತೇಶ್ ಬಂಗೇರ ಪ್ರಧಾನ ಕಾರ್ಯದರ್ಶಿ, ದೀಕ್ಷಿತ್ ವರಕಬೆ ಕಾರ್ಯದರ್ಶಿ, ನಾರಾಯಣ ಆಚಾರ್ಯ ಬರಾಯ ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರು ದೊಂಪದಬಲಿ ಉತ್ಸವ ಸಮಿತಿ ಮತ್ತು ಊರಿನ ನಾಗರಿಕರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಅನ್ನಸಂತರ್ಪಣೆ ಇರುವುದರಿಂದ ಭಕ್ತರು ಅಕ್ಕಿ, ತೆಂಗಿನಕಾಯಿ, ತರಕಾರಿಗಳನ್ನು ನೀಡಬಹುದು. ಪ್ರತಿಮನೆಯವರು ಕನಿಷ್ಠ2 ತೆಂಗಿನಕಾಯಿ, 2 ಎಳನೀರು, 1ಸೇರು ಅಕ್ಕಿ, ಎಳ್ಳೆಣ್ಣೆ ಹಾಗೂ ಹೆಚ್ಚಿನ ಧನ ಸಹಾಯವನ್ನು ನೀಡಿ, ಸಹಕರಿಸುವಂತೆ ವಿನಂತಿಸಲಾಗಿದೆ.

Related posts

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕುಂದುಕೊರತೆ ಸಭೆ

Suddi Udaya

ಉಜಿರೆ: ಎಸ್.ಡಿ.ಎಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ “ಸ್ಫೂರ್ತಿದಾಯಕ ವ್ಯಕ್ತಿತ್ವ” ಕಾರ್ಯಕ್ರಮ

Suddi Udaya

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರುಗೊಳಿಸಲು ಸಚಿವ ಸಂಪುಟ ಅನುಮೋದನೆ

Suddi Udaya

ಮಚ್ಚಿನ: ಕುಕ್ಕಿಲದಲ್ಲಿ ಗುಡ್ಡ ಕುಸಿದು ಮನೆ ಹಾಗೂ ಹಟ್ಟಿಗೆ ಸಂಪೂರ್ಣ ಹಾನಿ

Suddi Udaya

ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ

Suddi Udaya

ಕೊಕ್ಕಡ : ಸಾಧಕ ಡೇವಿಡ್ ಬೈಜು ರವರ ಮನೆಗೆ ನೆಲ್ಯಾಡಿಯ ಸಂತ ಅಲ್ಫೋನ್ಸಾ ಚರ್ಚಿನ ಧರ್ಮಗುರುಗಳಾದ ಚಂದರ್ ಶಾಜಿ ಮ್ಯಾಥ್ಯೂ ಭೇಟಿ

Suddi Udaya
error: Content is protected !!