ಅಳದಂಗಡಿ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ವತಿಯಿಂದ ನಂದಗೋಕುಲ ಗೋಶಾಲೆಯ ಗೋಗ್ರಾಸಕ್ಕಾಗಿ ರೂ 3 ಸಾವಿರ,ಸೈಂಟ್ ಪೀಟರ್ ಕ್ಲೇವರ್ ಚರ್ಚ್ ಶಾಲೆ ಅಳದಂಗಡಿ ಇಲ್ಲಿನ ಕಾರ್ಯಕ್ರಮಕ್ಕೆ ರೂ.3 ಸಾವಿರ ದೇಣಿಗೆಯನ್ನು ನೀಡಲಾಯಿತು.

ಜೊತೆಗೆ ಸೊಸೈಟಿಯ ಮರಣ ಸಾಂತ್ವನ ನಿಧಿಯನ್ನು ಇತ್ತಿಚೆಗೆ ನಿಧನರಾದ ಸೊಸೈಟಿ ಸದಸ್ಯರಾದ ಸಿದ್ದು ಪೂಜಾರಿ ಅಟ್ಟೆಮಾರು ನಾಲ್ಕೂರು ಇವರ ಪತ್ನಿಗೆ ರೂ 10 ಸಾವಿರವನ್ನು ಸೊಸೈಟಿ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸೊಸೈಟಿ ಹಿರಿಯ ಸಿಬ್ಬಂದಿ ಸತೀಶ್ ಕೆ ಹಾಗೂ ಇತರರು ಉಪಸ್ಥಿತರಿದ್ದರು.











