22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಬೆಳಗಾವಿ ಅಧಿವೇಶನ: ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ಏಕೆ?: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಈ ಭಾರಿಯ ಬೆಳೆ ವಿಮೆಯ ವಿತರಣೆಯಲ್ಲಿ ಕರಾವಳಿ ಭಾಗದ ಅಡಿಕೆ ಹಾಗೂ ಕರಿಮೆಣಸು ಬೆಳೆಗಾರರಿಗೆ ಅತೀ ಹೆಚ್ಚು ಮಳೆಯಿಂದಾಗಿ ಕೃಷಿಗೆ ಗರಿಷ್ಠ ಮಟ್ಟದ ಹಾನಿ ಉಂಟಾಗಿದ್ದರು ಅತ್ಯಂತ ಕಡಿಮೆ ವಿಮಾ ಪರಿಹಾರ ಬಂದಿದ್ದು ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ರೈತರಿಗೆ ಅನುಕೂಲವಾಗುವಂತೆ ಅತ್ಯಂತ ಹೆಚ್ಚಿನ ಮೊತ್ತದ ಪರಿಹಾರವನ್ನು ಒದಗಿಸುವಂತೆ ಶಾಸಕ ಹರೀಶ್ ಪೂಂಜ ಸರ್ಕಾರವನ್ನು ಸದನದಲ್ಲಿ ಒತ್ತಾಯಿಸಿದರು.

ಇಳಂತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2023ರಲ್ಲಿ 3,791 ಮಿ.ಮೀ. ಮಳೆ ಬಿದ್ದಿರುವುದಾಗಿ ಮಳೆಮಾಪಕ ಯಂತ್ರದಲ್ಲಿ ದಾಖಲಾಗಿದೆ. 58ಸಾವಿರ ರೂ. ವಿಮೆ ಸಿಕ್ಕಿತ್ತು. 2024ರಲ್ಲಿ 4,876 ಮಿ.ಮೀ. ಮಳೆಯಾಗಿತ್ತಾದರೂ ವಿಮೆ ಪರಿಹಾರ ಸಿಕ್ಕಿದ್ದು ಮಾತ್ರ 25,000 ರೂಪಾಯಿ. ಈ ತಾರತಮ್ಯ ಏಕೆ? ಇದಕ್ಕೆ ಏನು ಮಾನದಂಡ? ಹೆಚ್ಚು ಮಳೆ ಬಿದ್ದರೂ ಕಡಿಮೆ ವಿಮೆ ಪರಿಹಾರ ಏಕೆ? ಅಡಿಕೆ, ಕರಿಮೆಣಸು, ರಬ್ಬರ್‌ ಬೆಳೆಗಾರರಿಗೆ ಇದರಿಂದ ಸಾಕಷ್ಟು ನಷ್ಟ ಆಗುತ್ತಿದೆ ಎಂದು ಗಮನ ಸೆಳೆದರು.

Related posts

ಧರ್ಮಸ್ಥಳಕ್ಕೆ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯ ಎಂ.ಬಿ.ಎ. ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

Suddi Udaya

ಧರ್ಮಸ್ಥಳದಲ್ಲಿ “ಕೆಸರ್‌ಡ್ ಒಂಜಿ ದಿನ”

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನಿಂದ ಕ್ರೀಡಾ ಉಪಕರಣಗಳ ಕೊಡುಗೆ

Suddi Udaya

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ನಡ ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya

ಹೊಸಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಶ್ರೀ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Suddi Udaya

ಮುಂಡಾಜೆ ಜಮೀನಿನಲ್ಲಿ ಬೆಂಕಿ- ಆರಿಸಲು ನೆರವಾದ ರಾ.ಹೆ.ಕಾಮಗಾರಿಯ ನೀರಿನ ಟ್ಯಾಂಕರ್

Suddi Udaya
error: Content is protected !!