ಬೆಳ್ತಂಗಡಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ವತಿಯಿಂದ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಜವಾಹರ್ಲಾಲ್ ನೆಹರು ಒಳಗಿನ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ 14 ರ ವಯೋಮಾನದ ಕರಾಟೆ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರಾಟೆ ರಾಷ್ಟ್ರೀಯ “ಎ” ಗ್ರೇಡ್ ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ ಆಚಾರ್ಯ ನೇಮಕಗೊಂಡಿದ್ದಾರೆ.
ಕಾಶಿಬೆಟ್ಟು ಚಂದ್ರಯ್ಯ ಆಚಾರ್ಯ ಹಾಗೂ ರಾಜೀವಿ ಇವರ ಪುತ್ರರಾಗಿರುವ ಇವರು ಬೆಳ್ತಂಗಡಿ ಯಮತೋ ಶೋಟೋಕನ್ ಕರಾಟೆ ಸಂಸ್ಥೆಯ ಶಿಕ್ಷಕರಾಗಿದ್ದಾರೆ.











