July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸರಕಾರದಿಂದ ಮಂಜೂರುಗೊಂಡಿರುವ ಜಾಗವನ್ನು ಸವೆ೯ ನಡೆಸಲು ನಾಗರಿಕರ ಆಕ್ಷೇಪಣೆ: ಶಿಶಿಲ ಗ್ರಾಮಸ್ಥರಿಂದ ಉಪ್ಪಿನಂಗಡಿ ಉಪ ವಲಯಾಣ್ಯಾಧಿಕಾರಿಗೆ ಮನವಿ

ಶಿಶಿಲ: ಕಳೆಂಜದ ಸರ್ವೇ ನಂಬರ್ 309ರ ಸರ್ವೇ ಕಾರ್ಯ, ಶಿಶಿಲ ಭಾಗದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು, ಸರ್ವೇ ಅಧಿಕಾರಿಗಳು ತಮ್ಮ ಪಟ್ಟ ಜಮೀನುಗಳಲ್ಲಿ ಸರ್ವೇ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಬೇಸತ್ತ ಅಲ್ಲಿನ ನಿವಾಸಿಗಳು ಉಪ್ಪಿನಂಗಡಿ ಉಪವಲಯಾರಣ್ಯಧಿಕಾರಿಗೆ ದೂರು ನೀಡಿದ್ದು ದೂರಿನ ಪತ್ರದಲ್ಲಿ ಶಿಶಿಲ ಗ್ರಾಮದ ಹೊಳೆಗಂಡಿ, ದೇನೋಡಿ ಭಾಗದಲ್ಲಿ ಅಲ್ಲಿನ 80 ಕುಟುಂಬಗಳಿಗೆ 1966ರಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ ಜಮೀನು ಮಂಜೂರಾಗಿದ್ದು ಅದು ಅರಣ್ಯದಿಂದ ಕಂದಾಯಕ್ಕೆ ವಿಂಗಡಣೆಯಾಗಿರುತ್ತದೆ. ಆದ್ದರಿಂದ ಸರಕಾರವು ಮಂಜೂರು ಮಾಡಿರುವ ಭೂಮಿಯನ್ನು ಹೊರತುಪಡಿಸಿ ತಮ್ಮ ಅರಣ್ಯ ಭಾಗವನ್ನು ಮಾತ್ರ ಸರ್ವೇ ಮಾಡಬೇಕೆಂಬುದು ನಮ್ಮ ಮನವಿ ಸರಕಾರದಿಂದ ದೇನೋಡಿ ಭಾಗದಲ್ಲಿ ಮಂಜೂರಾಗಿರುವ ಜಮೀನಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಕ್ರಮವಾಗಿ ಪ್ರವೇಶ ಮಾಡಿ ಸರ್ವೇ ಮಾಡಿದ್ದು ಆ ಸರ್ವೇ ಕೂಡ ಅಸಮರ್ಪಕವಾಗಿದೆ.

ಇನ್ನೂ ಮುಂದಿನ ದಿನಗಳಲ್ಲಿ ಶಿಶಿಲ ಭಾಗದಲ್ಲಿ ಸರಕಾರದಿಂದ ಮಂಜೂರು ಗೊಂಡಿರುವ ಜಾಗವನ್ನು ಯಾವುದೇ ರೀತಿ ಸರ್ವೇ ನಡೆಸದಂತೆ ಆಕ್ಷೇಪಣೆ ಇರುತ್ತದೆ ಎಂದು ಉಪ್ಪಿನಂಗಡಿ ಉಪವಲಯಾರಣ್ಯಧಿಕಾರಿಗೆ ಶಿಶಿಲ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

Related posts

ಬ೦ಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ: ರೂ. 1020.75 ಕೋಟಿ ವ್ಯವಹಾರ, ರೂ. 4.30 ಕೋಟಿ ಲಾಭ, ಶೇ. 17 ಡಿವಿಡೆಂಡ್

Suddi Udaya

ಶಿಬಾಜೆ : ಹಾವುಗಳ ಗುರುತಿಸುವಿಕೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಕ್ರಮ

Suddi Udaya

ಬಳಂಜ ಬಿಲ್ಲವ ಸಂಘದಲ್ಲಿ, ಮಹಿಳಾ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ಆಟಿಡೊಂಜಿ‌ ದಿನ ಕಾರ್ಯಕ್ರಮ

Suddi Udaya

ಅ.24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Suddi Udaya

ಅಳದಂಗಡಿ: ಪಾದಚಾರಿಗೆ ಕಾರು ಡಿಕ್ಕಿ:

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya
error: Content is protected !!