September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ಕಥೋಲಿಕ್ ಸಭಾದಿಂದ ‘ಕ್ರಿಸ್ಮಸ್ ಬಂಧುತ್ವ ಉಡುಗೊರೆ ’ ಕಾರ್ಯಕ್ರಮ.

ಮಡಂತ್ಯಾರು: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಮಡಂತ್ಯಾರು ಘಟಕದಿಂದ ಕ್ರಿಸ್ಮಸ್ ಬಂಧುತ್ವ ಉಡುಗೊರೆ ಕಾರ್ಯಕ್ರಮ ಡಿ.14 ರಂದು ಜರುಗಿತು.

ಸೇ. ಹಾ. ಚರ್ಚಿನ ಪ್ರಧಾನ ಧರ್ಮಗುರುಗಳು ವಂ| ಸ್ವಾಮಿ ಸ್ಟ್ಯಾನಿ ಗೋವಿಯಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕ್ರಿಸ್ತ ಜಯಂತಿ ನಾವು ಡಿ.25 ರಂದು ಆಚರಿಸುತ್ತೇವೆ. ದೇವರು ಬಡವರಾಗಿ ಮಾನವ ರೂಪ ತಾಳಿ ಈ ಧರೆಗೆ ಬಂದದ್ದು ನಮ್ಮನ್ನು ಶ್ರೀಮಂತಗೊಳಿಸಲು. ದೇವರು 2025 ವರ್ಷದ ಹಿಂದೆ ಕಿಸ್ತನ ಜನನದ ಸಂದೇಶ ಸಾರಲು ಕುರುಬರನ್ನು ಮತ್ತು ನಕ್ಷತ್ರವನ್ನು ಮಾಧ್ಯಮವಾಗಿ ಉಪಯೋಗಿಸಿದರು. ಕ್ರಿಸ್ಮಸ್ ಸರ್ವರ ಹಬ್ಬ, ಎಲ್ಲರೂ ಸಂತೋಷ ಪಡಬೇಕು” ಎಂದು ಹೇಳಿದರು.

ಮುಖ್ಯ ಅತಿಥಿ ಮಾಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಮಾತನಾಡಿ ಮದರ್ ತೆರೆಜಾರವರು ಮಾನವ ಸೇವೆಯ ಮುಖಾಂತರ ದೇವರ ಸೇವೆ ಮಾಡಿದರು. ಡಿ.25 ದೇವ ಮಾನವ ಹುಟ್ಟಿದ ದಿನ. ಜನನ-ಮರಣ ಅದರ ಮಧ್ಯೆ ಜೀವನ. ನಮ್ಮಲ್ಲಿ ಒಂದೇ ಜಾತಿ, ಒಂದೆ ಮತ, ಒಂದೇ ದೇವರು ಈ ಕಲ್ಪನೆ ಇರಬೇಕು ಎಂದು ಹೇಳಿದರು.

ಯುನೈಟೆಡ್ ಫ್ರೆಂಡ್ಸ್, ಮಾಲಾಡಿ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ ಕ್ರಿಸ್ಮಸ್ ಕೇವಲ ಕ್ರಿಸ್ತರ ಹಬ್ಬ ಅಲ್ಲ, ಎಲ್ಲರ ಹಬ್ಬ. ಇದೊಂದು ಸುಂದರವಾದ ಕಾರ್ಯಕ್ರಮ. ಲೋಕದಲ್ಲಿ ಶಾಂತಿ ಸೌಹಾರ್ದತೆ ಮಾತ್ರವಲ್ಲ ‘ಬಂಧುತ್ವ’ ಸಹ ಮುಖ್ಯವಾಗಿರಬೇಕು ಎಂದು ತಿಳಿಸಿದರು.


ಮೈಸೂರು ಜಿ. ಕೆ. ಟಯರ್ಸ್‌ನ ಮಾಜಿ ಮ್ಯಾನೇಜರ್ ಕ್ಲಿಫರ್ಡ್ ಜೇಮ್ಸ್ ಡಿಸೋಜಾ, ಕ. ಸಭಾ ಮಂಗ್ಳುರ್ ಪ್ರದೇಶ್ ಉಪಾಧ್ಯಕ್ಷ ಲಿಯೋ ರಾಡ್ರಿಗಸ್ ಶುಭ ಹಾರೈಸಿದರು. ಸರ್ವ ಧರ್ಮಿಯರಿಗೆ ಕ್ರಿಸ್ಮಸ್ ಉಡುಗೊರೆ ನೀಡಿ ಗೌರವಿಸಲಾಯ್ತು.
ವೇದಿಕೆಯಲ್ಲಿ ವಿನ್ಸೆಂಟ್ ಡಿಸೋಜಾ, ಜೆರಾಲ್ಡ್ ಮೊರಾಸ್, ಶ್ರೀಮತಿ ಸೆಲೆಸ್ತಿನ್ ಡಿಸೋಜಾ ಉಪಸ್ಥಿತರಿದ್ದರು. ವಿನ್ಸೆಂಟ್ ಡಿಸೋಜಾ ಸ್ವಾಗತಿಸಿದರು, ರಿಚಾರ್ಡ್ ಮೊರಾಸ್ ವಂದಿಸಿದರು. ವಿನ್ಸೆಂಟ್ ಮೊರಾಸ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ತೀರ್ಥಸ್ನಾನ 

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯುವ ಹೆಚ್.ಪಿ.ವಿ ವ್ಯಾಕ್ಷಿನೇಷನ್ ಲಸಿಕಾ ಶಿಬಿರ

Suddi Udaya

ಉಜಿರೆ: ಯು.ಎಸ್. ಆಟೋ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಸವ ಆಚರಣೆ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಬೆಳ್ತಂಗಡಿ : ರಸ್ತೆ ಬದಿ ಕುಸಿದು ಬಿದ್ದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Suddi Udaya
error: Content is protected !!