July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯಿಂದ ಉದ್ಯಮದೊಂದಿಗೆ ಸಮಾಜಮುಖಿ ಸೇವೆ:

ಬೆಳ್ತಂಗಡಿ:ಬೆಳ್ತಂಗಡಿಯಲ್ಲಿ ಕಳೆದ 10 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಒಳ್ಳೆಯ ಸೇವೆ ನೀಡುತ್ತಿರುವ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಸ್ಕೀಮ್ವನ ಸೀಸನ್ 6ರ ಯಶಸ್ವಿ ಮುಕ್ತಾಯದೊಂದಿಗೆ ಮತ್ತೆ ಸೀಸನ್ 7 ರ ಜೊತೆಗೆ ನಿಮ್ಮಮುಂದೆ ಬರಲಿದ್ದೇವೆ ಎಂದು ಪವರ್ ಆನ್ ಸಂಸ್ಥೆಯ ಮಾಲಕರಾದ ಶೀತಲ್ ಜೈನ್ ತಿಳಿಸಿದರು.

ನಮ್ಮ ಸಂಸ್ಥೆಯ ಮಹತ್ತರವಾದ ಆಶಯವನ್ನು ನಿಮಗೆ ಹೇಳಲೇಬೇಕು ನಾವು ಯಾವ ಯೋಜನೆಯನ್ನು ಶುರು ಮಾಡಿದರೂ ಅದನ್ನು ಮಧ್ಯದಲ್ಲಿ ನಿಲ್ಲಿಸುವಂತಹ ಯಾವುದೇ ಯೋಚನೆ ನಮ್ಮಲ್ಲಿಲ್ಲ ಮತ್ತು ಹಾಗೆ ಯಾವತ್ತೂ ಆಗೋದಿಲ್ಲ.ಪ್ರತೀ ಸೀಸನನ್ನು ಗ್ರಾಹಕರ ಸಂಪೂರ್ಣ ವಿಶ್ವಾಸದೊಂದಿಗೆ, ನಿಗದಿತ ರೀತಿಯಲ್ಲಿ ಮುಗಿಸಿ, ಮತ್ತೆ ಹೊಸ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ಅವಧಿ ಹೆಚ್ಚಾಯಿತು, ದೊಡ್ಡ ದೊಡ್ಡ ಬಹುಮಾನ ಇಲ್ಲ ಅಂತ ನಿಮ್ಮಲ್ಲೊಂದು ಪ್ರಶ್ನೆ ಇರಬಹುದು. ಆದರೆ ಬೆಳ್ತಂಗಡಿ ಮತ್ತು ಗ್ರಾಮೀಣ ಭಾಗದ ಜನರ ನಿಜವಾದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು,ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ನೋಡಿ ನಮ್ಮ ಯೋಜನೆಯಲ್ಲಿ ಬಹುಮಾನಗಳನ್ನು ನಿಗದಿ ಪಡಿಸುತ್ತೇವೆ. ಪ್ಲಾಟ್, ಕಾರ್ ಗಳಂತಹ ದೊಡ್ಡ ಗಿಫ್ಟ್ ಇಡುವುದಿಲ್ಲ ಅದಕ್ಕೆ ಕಾರಣ- ಈ ರೀತಿಯ ದೊಡ್ಡ ಗಿಫ್ಟ್ ಗಳು ಕೇವಲ ಒಬ್ಬರಿಗೆ ಹಂಚಿ ಹೋಗುವುದೇ ಆಗಿದೆ. ಹಾಗಾಗಿ, ಅದೇ ಮೌಲ್ಯದ ಬೇರೆ ಗುಣಮಟ್ಟದ ವಸ್ತುಗಳನ್ನು ಹೆಚ್ಚಿನ ಜನರಿಗೆ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದೇ ನಮ್ಮಗುರಿಯಾಗಿದೆ ಎಂದವರು ತಿಳಿಸಿದ್ದಾರೆ.

ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಸಾಮಾನ್ಯ ಕುಟುಂಬಗಳುಗೂ ಉಪಯೋಗವಾಗುವಂತಹ ಯೋಜನೆಯನ್ನು ರೂಪಿಸುತ್ತೇವೆ. ಜನಸಾಮಾನ್ಯರಿಗೆ ಯಾವುದೇ ಒತ್ತಡವಿಲ್ಲದೆ ಸೇರಬಹುದಾದ ಹಾಗೂ ನಮ್ಮಿಂದ ಮುಂದುವರಿಸಿಕೊಂಡು ಹೋಗಬಹುದಾದ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಮ್ಮ ಉದ್ದೇಶ – ಹೆಚ್ಚು ಜನ ಭಾಗವಹಿಸಬೇಕು, ಪ್ರತಿಯೊಬ್ಬರೂ ಗೆಲ್ಲುವ ಅವಕಾಶ ಹೊಂದಿರಬೇಕು! ಆದ್ದರಿಂದ ಸೀಸನ್ 7 ರಲ್ಲಿ ಕೂಡ ಹಾಗೇಯೇ ಯೋಚಿಸಿದ್ದೇವೆ. ಜನರ ವಿಶ್ವಾಸವೇ ಪವರ್ ಆನ್ ನ ಶಕ್ತಿ. ನಾವು ಆರಂಬಿಸುತ್ತಿರುವ ಲಕ್ಕಿ ಸ್ಟಾರ್ ಸ್ಕೀಂ ಸೀಸನ್ 7-ನಿಮಗಾಗಿ, ನಿಮ್ಮ ಮನೆಯ ಸಂತೋಷಕ್ಕಾಗಿ, ನಿಮ್ಮ ವಿಶ್ವಾಸಕ್ಕೆ ನಮ್ಮಸೇವೆ ಎಂದು ಶೀತಲ್ ಜೈನ್ ತಿಳಿಸಿದರು.

Related posts

ಗುರುವಾಯನಕೆರೆ: ಎನ್.ಇ.ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ವಿದ್ಯುತ್ ಕಾಮಗಾರಿ ವೇಳೆ ಕಂಬದಿಂದ ಬಿದ್ದು ಮುಗೇರಡ್ಕ ನಿವಾಸಿ ಪ್ರಕಾಶ್ ಮೃತ್ಯು

Suddi Udaya

ಮುಂಡಾಜೆ: ನೆಟ್ವರ್ಕ್ ಸಮಸ್ಯೆಗೆ ರಸ್ತೆ ಕಾಮಗಾರಿ ಅಡ್ಡಿ!

Suddi Udaya

ಸುಲ್ಕೇರಿ ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಭಂಡಾರಿಗೋಳಿ ವತಿಯಿಂದ ಆರ್ಥಿಕ ಧನ ಸಹಾಯ ಹಾಗೂ ಅಕ್ಕಿ ವಿತರಣೆ

Suddi Udaya

ಕೊರಂಜ ಸ.ಉ.ಪ್ರಾ. ಶಾಲಾ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ವಿತರಣೆ

Suddi Udaya

ಕೌಟುಂಬಿಕ ವಿಚಾರದಲ್ಲಿ ಕಲಹ: ಮಾವನಿಗೆ ಸ್ಕೂಟರ್ ನಲ್ಲಿ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಅಳಿಯ: ಮಿತ್ತಬಾಗಿಲು ಕಂಬಳದಡ್ಡದಲ್ಲಿ ನಡೆದ ಘಟನೆ

Suddi Udaya
error: Content is protected !!