23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗೇರುಕಟ್ಟೆ : ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಕಾಜೂರು ತಂಙಳ್ ರವರು ಅಧಿಕಾರ ಸ್ವೀಕಾರ ಮತ್ತು ಮಹಾಸಭೆ

ಗೇರುಕಟ್ಟೆ: ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನಿರ್ದೇಶನದಂತೆ ಕಾಜೂರು ತಂಙಳ್ ರವರು ಪರಪ್ಪು ಜಮಾಅತಿನ ಗೌರವಾದ್ಯಕ್ಷರಾಗಿ ಡಿ.19 ರಂದು ಅಧಿಕಾರ ಸ್ವೀಕರಿಸಿದರು.

ನಂತರ ದುಅ ನೆರವೇರಿಸಿ ಮಹಾಸಭೆ ನಡೆಸಿಕೊಟ್ಟರು. ಖತೀಬ್ ಎಫ್.ಎಚ್.ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಗತ ವರ್ಷದ ವರದಿ ಮತ್ತು ಜಮಾ ಖರ್ಚಿನ ವಿವರವನ್ನು ಅಬ್ದುಲ್ ಕರೀಮ್ ಸಭೆಗೆ ಓದಿ ಹೇಳಿದರು.
ಮಹಾಸಭೆಯಲ್ಲಿ ಮೊಹಲ್ಲಾದ ಅಭಿವೃದ್ಧಿಗಾಗಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕೆಲ ಸದಸ್ಯರು ಸಲಹೆಗಳನ್ನು ನೀಡಿದರು.


ಜಮಾಅತರ ಅಭಿಪ್ರಾಯ ಪಡೆದು ಹೊಸ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮುಪತ್ತಿಸ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಅಲ್ ಅಫ್ಳಲಿ, ಪ್ರಧಾನ ಕಾರ್ಯದರ್ಶಿಯಾಗಿ ಎಚ್ ಎಸ್ ಸೈಫುಲ್ಲ,ಕೋಶಾದಿಕಾರಿಯಾಗಿ ಅಬ್ದುಲ್ ಬಶೀರ್ ಟಿಂಬರ್ ಉಪಾದ್ಯಕ್ಷರಾಗಿ ಮೊಹಮ್ಮದ್ ಹನೀಫ್ ಬಿ.ಐ.,ಅಬ್ದುಲ್ಲ ಕುಂಙ ದಾರಿಮಿ, ಸದಸ್ಯರುಗಳಾಗಿ ಅಬ್ದುಲ್ ಕರೀಮ್ ಗೇರುಕಟ್ಟೆ,ಬಿ.ಕೆ ರವೂಫ್ ಹಾಜಿ,ಎನ್.ಎನ್ ಮಹಮ್ಮದ್, ಅಬ್ದುಲ್ಲ ಎಸ್ ಯು, ಅಬೂಬಕ್ಕರ್ ಕೆ.ಎಮ್ ,ಶರೀಫ್ ಜಿ ಆಯ್ಕೆಯಾದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವೀಲ್ ಚಯರ್ ವಿತರಣೆ

Suddi Udaya

ಕೊಯ್ಯೂರು: ಬಜಿಲ ಶ್ರೀ ವಿಷ್ಣುಮೂರ್ತಿ ಪುರುಷರ ಬಳಗದಿಂದ ಪುರುಷ ಪೂಜೆ, ಸನ್ಮಾನ

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಸಮಾಲೋಚನೆ ಸಭೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಗೇರುಕಟ್ಟೆ: ವರ್ಗಾವಣೆ ಹೊಂದಿದ ಶಿಕ್ಷಕಿ ಮಮತಾರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಮಾಸ್ಟರ್ಸ್ ಕೋಚಿಂಗ್ ಕ್ಲಾಸ್ ನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಎಸ್ ಡಿ ಎಂ ಕಾಲೇಜಿನಲ್ಲಿ ಎನ್‌ಐಪಿಎಮ್‌ನ ವಿದ್ಯಾರ್ಥಿ ಘಟಕಕ್ಕೆ ಚಾಲನೆ

Suddi Udaya
error: Content is protected !!