ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮೆಸ್ಕಾಂ ಅಧ್ಯಕ್ಷ ಕೆ ಹರೀಶ್ ಕುಮಾರ್ ರವರು ಡಿ. 22 ರoದು ಭೇಟಿ ನೀಡಿದರು. ಅವರ ಸೇವಾರ್ಥವಾಗಿ ರಂಗ ಪೂಜೆ ಹಾಗೂ ಅನ್ನದಾನ ಸೇವೆ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ್ ಭಟ್ ಮಠ ಪ್ರಸಾದ ನೀಡಿ ದೇವಸ್ಥಾನದ ವತಿಯಿಂದ ಗೌರವಿಸಿದರು. ಈ ಸಂದರ್ಭದಲ್ಲಿ ಕೆ ಹರೀಶ್ ಕುಮಾರ್ ರವರ ಪತ್ನಿ ನಮಿತಾ ಹರೀಶ್ ಕುಮಾರ್. ಮತ್ತು ಮನೆಯವರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊoಡೆಮಾರು , ಸದಸ್ಯರು, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾಲಾಡಿ, ಚoದ್ರಹಾಸ್ ಕೇದೆ, ಮತ್ತಿತರರು ಉಪಸ್ಥಿತರಿದ್ದರು.











