23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಂಗ್ವಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವ: ಧ್ವಜಾರೋಹಣ

ಮಿತ್ತಬಾಗಿಲು: ಬಂಗ್ವಾಡಿ ಬಸದಿ ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಮಹಾರಥೋತ್ಸವವು ಡಿ.25ರಿಂದ ಡಿ. 31ರವರೆಗೆ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು, ದಾನಶಾಲಾ ಮಠ, ಕಾರ್ಕಳ ಇವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನೆರವೇರಲಿರುವುದು.

ಡಿ.25 ತೋರಣ ಮುಹೂರ್ತ, ವಿಮಾನ ಶುದ್ಧಿ, ಯಕ್ಷಾರಾಧನೆ, ಧ್ವಜಾರೋಹಣ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ನಡೆಯಿತು.

ಸಂಜೆ 6.೦೦ರಿಂದ ಶ್ರೀ ಕ್ಷೇತ್ರಪಾಲ ದೇವರಿಗೆ ಆರಾಧನಾ ಪೂರ್ವಕ ಕಲಾರೋಪಣೆ, ಡಿ.26 ನಾಂದಿಮಂಗಲ, ಮೃತ್ತಿಕಾ ಸಂಗ್ರಹಣ, ಅಂಕುರಾರ್ಪಣೆ, ಭೇರಿತಾಡನ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ. ಸಂಜೆ 5.30ಕ್ಕೆ ಉಪಾಹಾರದ ವ್ಯವಸ್ಥೆ, ಡಿ.27 ವಾಸ್ತು ಶಾಂತಿ, ನಿತ್ಯವಿಧಿ ಸಹಿತ ಕ್ಷೀರಾಭಿಷೇಕ ಡಿ.28 ಶ್ರೀ ಪೀಠಯಂತ್ರಾರಾಧನೆ, ನಿತ್ಯವಿಧಿಸಹಿತ ಕ್ಷೀರಾಭಿಷೇಕ, ಡಿ.29 ನಿತ್ಯವಿಧಿ ಸಹಿತ ಬೃಹಚ್ಫಾಂತಿ ಯಂತ್ರಾರಾಧನೆ, ಪಾಲಕಿ ಉತ್ಸವ, ಕ್ಷೀರಾಭಿಷೇಕ, ಡಿ.೩೦ (ಮಧ್ಯಾಹ್ನ) ದರ್ಶನಬಲಿ, ರಥಾರೋಹಣ, ಮಹಾನೈವೇದ್ಯ ಪೂಜೆ ಸಂಘ ಸಂತರ್ಪಣೆ, ರಾತ್ರಿ ಗಂಟೆ 9.00 ರಿಂದ ಮಹಾರಥೋತ್ಸವ, ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯಲ್ಲಿ 108 ಕಲಶ ಮಹಾಭಿಷೇಕ ರಾತ್ರಿ ಗಂಟೆ 7.00ಕ್ಕೆ ಬೆಂಗಳೂರು ದೂರದರ್ಶನದ ಬಿ. ಗ್ರೇಡ್ ಕಲಾವಿದೆ ಕು| ಅನನ್ಯ ರಂಜಿನಿ, ಮೂಡಬಿದಿರೆ. ಇವರಿಂದ ಭರತನಾಟ್ಯ ನಡೆಯಲಿದೆ.

ಜ. 10 ರಂದು ಅತಿಶಯ ಕ್ಷೇತ್ರ ಶ್ರವಣಗುಂಡ ಶ್ರೀ ಬ್ರಹ್ಮಯಕ್ಷ ದೇವರ ಸನ್ನಿಧಿಯಲ್ಲಿ ಮುಡಿ ಅಕ್ಕಿ ಪೂಜೆ (ಗುಂಡುದರ್ಶನ ದಿನ), ಕುಂಕುಮೋತ್ಸವ, ಧ್ವಜಾವರೋಹಣ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

Related posts

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್. ಪ್ರಭಾಕರ, ಉಪಾಧ್ಯಕ್ಷರಾಗಿ ಪ್ರತಾಪ್ ಶೆಟ್ಟಿ ಆಯ್ಕೆ

Suddi Udaya

ಕುವೆಟ್ಟು: ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬಳಂಜ: ಅಟ್ಲಾಜೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಾಂಗ್ರೆಸ್ ಸರಕಾರ ರಚನೆ ಹಿನ್ನೆಲೆ: ಕೊಕ್ಕಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮೋತ್ಸವ

Suddi Udaya

ಧರ್ಮಸ್ಥಳ : ಸಿಂದೂರ ಮಹಿಳಾ ವಿಭಾಗಕ್ಕೆ ಗಣ್ಯರಿಂದ ಮೆಚ್ಚುಗೆ

Suddi Udaya

ಹೆರಾಜೆ ಕುಟುಂಬದ ಮೂಲ ಕ್ಷೇತ್ರ ಮುಗ್ಗ ಗುತ್ತುವಿನಲ್ಲಿ ಸ್ಪಂದನರವರ ಆತ್ಮವನ್ನು ಹಿರಿಯರೊಂದಿಗೆ ಸೇರಿಸುವ ಕಾರ್ಯಕ್ರಮ ನಟ ವಿಜಯರಾಘವೇಂದ್ರ ಕುಟುಂಬಸ್ಥರು ಭಾಗಿ

Suddi Udaya
error: Content is protected !!