ಬೆಳ್ತಂಗಡಿ: ತಾಲೂಕಿನ ತಣ್ಣೀರುಪಂತ ಮತ್ತು ಪುತ್ತಿಲ ಗ್ರಾಮದ ಕುದ್ಕೋಳಿಕಟ್ಟೆ ಧರ್ಮರಸು, ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಗರಡಿ ಮತ್ತು ಸಹಪರಿವಾರಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಡಿ.26ರಿಂದ 27ರವರೆಗೆ ಜರುಗಿತು.


ಡಿ.26 ರಂದು ಕೊಡಿಮರದ ಭವ್ಯ ಮೆರವಣಿಗೆ , ಕೊಳಿಗುಂಟ, ಗೊನೆಮೂಹರ್ತ, ಗಣಪತಿ ಹವನ, ಸ್ಥಳ ಶುದ್ಧಿ, ಭಂಡಾರ ಇಳಿದು ತೋರಣ ಮೂಹರ್ತ, ಧ್ವಜಾರೋಹಣ, ಸಾನಿಧ್ಯಗಳಿಗೆ ಪರ್ವ ಸೇವೆ, ಕೊಡಮಣಿತ್ತಾಯ ದೈವಕ್ಕೆ ಹೂವಿನ ಪೂಜೆ, ಬಲಿ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆದು ರಾತ್ರಿ ಧರ್ಮರಸು ಮತ್ತು ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು. ಡಿ.27ರಂದು ಬ್ರಹ್ಮಬೈದರ್ಕಳ ಗರಿಯಕೆ ಭಕ್ತ ಹಾಕುವುದು, ಬಲಿ ಉತ್ಸವ ನಡೆದು ಬ್ರಹ್ಮಬೈದರ್ಕಳ ಗರಡಿ ತಿಳಿಯುವುದು ಮಾಣಿಬಾಲೆ ನೇಮೋತ್ಸವ ಭಕ್ತಿ ಭಾವದೊಂದಿಗೆ ನಡೆಯಿತು.











