September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿವರದಿ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದ ಉದ್ಘಾಟನೆ

ಉಜಿರೆ: ಕ್ರೀಡೆ ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವರವಾದ ಪಾತ್ರವನ್ನು ವಹಿಸಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಕ್ರೀಡಾ ಕೂಟವು ಎಲ್ಲಾ ಧರ್ಮದವರನ್ನು ಒಟ್ಟುಗೂಡಿಸುವ ಕೆಲಸದ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ರೂಪಿಸುತ್ತದೆ. ಈ ವೇದಿಕೆ ಸಂಘಟನೆಯಲ್ಲಿರುವ ಯುವಕರಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವುದಕ್ಕೆ ಸೂಕ್ತವಾಗಿದೆ ಎಂದು ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೇರಿಮಾರ್ ಹೇಳಿದರು.

ಅವರು ಡಿ.28ರಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಯುವ “ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು” ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಬಿಲ್ಲರೋಡಿ, ಕಾರ್ಯದರ್ಶಿ ಅಶೋಕ್ ಗೌಡ ಸಂಧ್ಯಾ ಆಟೋ ಉಜಿರೆ, ಹಿರಿಯ ಕಾರ್ಯಕರ್ತ ಉಮೇಶ್ ಅತ್ತಾಜೆ, ಉದ್ಯಮಿ ಬಿಜೋಯಿ ಬಿ, ಕಿಶೋರ್, ಸೋಮಪ್ಪ ಪೂಜಾರಿ ಕುಂಜರ್ಪ, ಕೃಷ್ಣಪ್ಪ ಅಂಚನ್, ಮುಕೇಶ್ ಶೆಟ್ಟಿ ಉಪಸ್ಥಿತರಿದ್ದರು.ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಮಂದರ್ಸ ಸ್ವಾಗತಿಸಿದರು. ಗೌರವಾಧ್ಯಕ್ಷಹರೀಶ್ ಬರಮೇಲು ವಂದಿಸಿದರು.

ಸ್ಪರ್ಧೆಗಳು: ಮಕ್ಕಳಿಗೆ : 1ರಿಂದ 5ನೇ ತರಗತಿ : 100ಮೀ ಓಟ, ಲಿಂಬೆ ಚಮಚ, ಬಾಲ್ ಪಾಸಿಂಗ್, ಹಿಂದೆ ಓಟ. ಮಕ್ಕಳಿಗೆ : 6ರಿಂದ 10ನೇ ತರಗತಿ : 100ಮೀ ಓಟ, ಗಿರ್‌ಗಿಟ್‌ಲೇ, ಲಿಂಬೆ ಚಮಚ, ಅಡಿಕೆ ಹಾಳೆ ಓಟ, ಹಿಂದೆ ಓಟ. ಪುರುಷರಿಗೆ : 100ಮೀ ಓಟ, ಕಂಬಳ ಓಟ, 3 ಕಾಲಿನ ಓಟ, ಹಿಂದೆ ಓಟ, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ. ಮಹಿಳೆಯರಿಗೆ : 100ಮೀ ಓಟ, ಹಿಂದೆ ಓಟ, ಗಿರ್‌ಗಿಟ್‌ಲೇ, 3 ಕಾಲಿನ ಓಟ, ಬಾಲ್ ಪಾಸಿಂಗ್, ತ್ರೋಬಾಲ್‌, ಹಗ್ಗಜಗ್ಗಾಟ ನಡೆಯಲಿದೆ.

ವಿಶೇಷ ಸೂಚನೆ : ಮೇಲಿನ ಎಲ್ಲಾ ಆಟಗಳಿಗೆ ತಂಡಗಳನ್ನು ಸ್ಥಳದಲ್ಲಿಯೇ ರಚಿಸಲಾಗುವುದು. ವಿಜೇತರಿಗೆ ‘ಸೌಜನ್ಯ ಟ್ರೋಫಿ’. ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೆ ಅಂತಿಮ. ಅಶಿಸ್ತು ತೋರಿದ ತಂಡವನ್ನು ಕೂಟದಿಂದ ಹೊರಹಾಕಲಾಗುವುದು. ಮಧ್ಯಾಹ್ನ 12.00 ಗಂಟೆಗೆ ಪುರುಷರ ದೇಹ ತೂಕ ಪ್ರಾರಂಭಗೊಳ್ಳುತ್ತದೆ. 2.00 ಗಂಟೆಗೆ ಹಗ್ಗಜಗ್ಗಾಟ ಪ್ರಾರಂಭ.

Related posts

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ

Suddi Udaya

ಮಿತ್ತಬಾಗಿಲು: ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಶ್ರೀ ಗುರು ಮಾಣಿಕ್ಯ ಪ್ರಶಸ್ತಿ ಸೆ. 5ರಂದು ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ

Suddi Udaya

ಕುಂಡದಬೆಟ್ಟು ಉರೂಸ್ ಗೆ ಸಮಾಪ್ತಿ

Suddi Udaya

ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ರವರಿಗೆ ಭಾರತ ರತ್ನ ಗೌರವ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧ ದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

Suddi Udaya
error: Content is protected !!