July 23, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿವರದಿ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದ ಉದ್ಘಾಟನೆ

ಉಜಿರೆ: ಕ್ರೀಡೆ ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವರವಾದ ಪಾತ್ರವನ್ನು ವಹಿಸಿದ್ದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಕ್ರೀಡಾ ಕೂಟವು ಎಲ್ಲಾ ಧರ್ಮದವರನ್ನು ಒಟ್ಟುಗೂಡಿಸುವ ಕೆಲಸದ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ರೂಪಿಸುತ್ತದೆ. ಈ ವೇದಿಕೆ ಸಂಘಟನೆಯಲ್ಲಿರುವ ಯುವಕರಿಗೆ ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವುದಕ್ಕೆ ಸೂಕ್ತವಾಗಿದೆ ಎಂದು ಉಜಿರೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೇರಿಮಾರ್ ಹೇಳಿದರು.

ಅವರು ಡಿ.28ರಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಯುವ “ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು” ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕೆಸರ್ದ ಕಂಡೊಂಡು ಕುಸಲ್ದ ಗೊಬ್ಬುಲು ಕಾರ್ಯಕ್ರಮದ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಬಿಲ್ಲರೋಡಿ, ಕಾರ್ಯದರ್ಶಿ ಅಶೋಕ್ ಗೌಡ ಸಂಧ್ಯಾ ಆಟೋ ಉಜಿರೆ, ಹಿರಿಯ ಕಾರ್ಯಕರ್ತ ಉಮೇಶ್ ಅತ್ತಾಜೆ, ಉದ್ಯಮಿ ಬಿಜೋಯಿ ಬಿ, ಕಿಶೋರ್, ಸೋಮಪ್ಪ ಪೂಜಾರಿ ಕುಂಜರ್ಪ, ಕೃಷ್ಣಪ್ಪ ಅಂಚನ್, ಮುಕೇಶ್ ಶೆಟ್ಟಿ ಉಪಸ್ಥಿತರಿದ್ದರು.ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಸಂದೀಪ್ ಶೆಟ್ಟಿ ಮಂದರ್ಸ ಸ್ವಾಗತಿಸಿದರು. ಗೌರವಾಧ್ಯಕ್ಷಹರೀಶ್ ಬರಮೇಲು ವಂದಿಸಿದರು.

ಸ್ಪರ್ಧೆಗಳು: ಮಕ್ಕಳಿಗೆ : 1ರಿಂದ 5ನೇ ತರಗತಿ : 100ಮೀ ಓಟ, ಲಿಂಬೆ ಚಮಚ, ಬಾಲ್ ಪಾಸಿಂಗ್, ಹಿಂದೆ ಓಟ. ಮಕ್ಕಳಿಗೆ : 6ರಿಂದ 10ನೇ ತರಗತಿ : 100ಮೀ ಓಟ, ಗಿರ್‌ಗಿಟ್‌ಲೇ, ಲಿಂಬೆ ಚಮಚ, ಅಡಿಕೆ ಹಾಳೆ ಓಟ, ಹಿಂದೆ ಓಟ. ಪುರುಷರಿಗೆ : 100ಮೀ ಓಟ, ಕಂಬಳ ಓಟ, 3 ಕಾಲಿನ ಓಟ, ಹಿಂದೆ ಓಟ, ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ. ಮಹಿಳೆಯರಿಗೆ : 100ಮೀ ಓಟ, ಹಿಂದೆ ಓಟ, ಗಿರ್‌ಗಿಟ್‌ಲೇ, 3 ಕಾಲಿನ ಓಟ, ಬಾಲ್ ಪಾಸಿಂಗ್, ತ್ರೋಬಾಲ್‌, ಹಗ್ಗಜಗ್ಗಾಟ ನಡೆಯಲಿದೆ.

ವಿಶೇಷ ಸೂಚನೆ : ಮೇಲಿನ ಎಲ್ಲಾ ಆಟಗಳಿಗೆ ತಂಡಗಳನ್ನು ಸ್ಥಳದಲ್ಲಿಯೇ ರಚಿಸಲಾಗುವುದು. ವಿಜೇತರಿಗೆ ‘ಸೌಜನ್ಯ ಟ್ರೋಫಿ’. ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ. ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೆ ಅಂತಿಮ. ಅಶಿಸ್ತು ತೋರಿದ ತಂಡವನ್ನು ಕೂಟದಿಂದ ಹೊರಹಾಕಲಾಗುವುದು. ಮಧ್ಯಾಹ್ನ 12.00 ಗಂಟೆಗೆ ಪುರುಷರ ದೇಹ ತೂಕ ಪ್ರಾರಂಭಗೊಳ್ಳುತ್ತದೆ. 2.00 ಗಂಟೆಗೆ ಹಗ್ಗಜಗ್ಗಾಟ ಪ್ರಾರಂಭ.

Related posts

ಲಾಯಿಲ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ನಡ ಗ್ರಾಮ ಸಹಾಯಕ ಜಯರಾಜ್ ಮೃತ್ಯು

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಭೇಟಿ

Suddi Udaya

ಕೊಕ್ಕಡ: ತೆಂಕುಬೈಲಿನಲ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನಾಗತಂಬಿಲ

Suddi Udaya

ಧರ್ಮಸ್ಥಳ: ನೇರ್ತನೆ ನಿವಾಸಿ ಸ್ಟ್ಯಾನಿ ಜೋಸೆಫ್ ನಿಧನ

Suddi Udaya

ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆಗೆಯುವಂತೆ ಸ್ಥಳೀಯರ ಒತ್ತಾಯ

Suddi Udaya

ಶ್ರೀ ಎರ್ನೋಡಿ ಕ್ಷೇತ್ರ ಉಜಿರೆ ವಷಾ೯ವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!