ಉಜಿರೆ: ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಿತ್ರ ಮಹಿಳಾ ಮಂಡಲದ ನೇತೃತ್ವದಲ್ಲಿ “29ನೇ ವರ್ಷದ ಪ್ರತಿಭಾ ಸಂಗಮ ಕಾರ್ಯಕ್ರಮವು ಡಿ.27 ರಂದು ಸಂಜೆ ಯುವಕ ಮಂಡಲದ ವಠಾರದ ಅರಳಿ ರಂಗ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಆಶೋಕ್ ಕುಕ್ಕೇಶ್ರೀ ವಹಿಸಿಕೊಂಡು ಸಭಾ ಉದ್ಘಾಟಕರಾಗಿ ವಿನಯ್ ಚಂದ್ರ ಉಜಿರೆ ದೀಪಾ ಪ್ರಜ್ವಾಲನೆಯ ಮೂಲಕ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಹರೀಶ್ ಶೆಟ್ಟಿ ಬೆಳ್ತಂಗಡಿ, ರವಿಚಂದ್ರ ಗಾಂಧಿನಗರ, ಗಿರೀಶ್ ದೊಂಪದಪಲ್ಕೆ, ವೆಂಕಟೇಶ್ ಆಚಾರ್ಯ ಕಾಶಿಬೆಟ್ಟು , ಮಿತ್ರ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ಸುರೇಶ್ ಉಪಸ್ಥಿತಿರಿದ್ದರು.
ಸಂತೋಷ್ ಸಾಲಿಯನ್ ಸ್ವಾಗತಿಸಿ, ಚೇತನ್ ಬಂಗೇರ ಅರಳಿ, ನಿಶಿತ್ ಬಂಗೇರ ನಾನಿಲ್ದಡಿ ನಿರೂಪಿಸಿ, ಲೋಲಾಕ್ಷೀ ರಾಘವ ಗೌಡ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮ: ಅರಳಿ ಭಜನಾ ತಂಡದಿಂದ ಕುಣಿತ ಭಜನೆ ಹಾಗೂ ಊರಿನ ವಿವಿಧ ಪ್ರತಿಭಾ ಕಲೆಯಿಂದ ನೃತ್ಯ .ಗಾಯನ, ಪ್ರಹಸನದ ಮೂಲಕ ಅನಾವರಣಗೊಂಡು ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರ ಮೂಲಕ ತೆಲಿಕೆದ ಬರ್ಸ ಕಾಮಿಡಿ 90 ನಡೆಯಿತು.











