ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ವತಿಯಿಂದ ದ.ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಇವರ ನೇತೃತ್ವದಲ್ಲಿ, ಸಂತೋಷ್ ಜೆ.ಪಿ. ದೆಹಲಿ ಇವರು ಮಹಾಪೋಷಕರಾಗಿ, ಮುಂಬೈ ಉದ್ಯಮಿಗಳಾದ ಸುಂದರ್ ರಾಜ್ ಹೆಗ್ಡೆ ಇವರ ಸಾರಥ್ಯದಲ್ಲಿ 18ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭವು ಮಾ. 8 ರಂದು ಪುಂಜಾಲಕಟ್ಟೆ, ಬಂಗ್ಲೆ ಮೈದಾನದಲ್ಲಿ ಜರುಗಲಿದೆ.
ವಧುವಿಗೆ ಮಂಗಲ ಸೂತ್ರ ಹಾಗೂ ವಧು ವರರಿಗೆ ಮಂಗಳ ವಸ್ತ್ರಗಳನ್ನು ನೀಡಲಾಗುವುದು.
ವಧುವಿನ ಹೆಸರಿನಲ್ಲಿ ಸರಕಾರದಿಂದ ದೊರಕುವ 50,000 ರೂಪಾಯಿಗಳ ಬಾಂಡ್ ನೀಡಲಾಗುವುದು. ಆಸಕ್ತ ವಧು-ವರರು ತಮ್ಮ ಹೆಸರುಗಳನ್ನು ನೊಂದಾಯಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











