ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಜ್ಯ ಮಟ್ಟದ ಸ್ಕೌಟ್ಸ್‌ & ಗೈಡ್ಸ್‌ ಜಾಂಬೋರೇಟ್‌ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಕ್ಕಿ ಕೊಡುಗೆ

ಬೆಳ್ತಂಗಡಿ: ಡಿ.27 ರಿಂದ ಜ. 1 ರವರೆಗೆ 7 ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 29 ನೇ ಸ್ಕೌಟ್ಸ್‌ & ಗೈಡ್ಸ್‌ ಜಾಂಬೋರೇಟ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್‌ ಅಕ್ಕಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಸಾದ ರೂಪದಲ್ಲಿ ನೀಡಿ ಜಾಂಬೋರೇಟ್ ಗೆ ಶುಭ ಹಾರೈಸಿದ್ದಾರೆ.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೆಂದ್ರ ಕುಮಾರ್‌ ಇವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಛತ್ರದಿಂದ ಕಳುಹಿಸಿಕೊಡಲಾಯಿತು. ಅಕ್ಕಿಯನ್ನು ಕಳುಹಿಸುವ ಸಂದರ್ಭದಲ್ಲಿ ಭಾರತ್‌ ಸ್ಸ್ಕೌಟ್ಸ್‌ & ಗೈಡ್ಸ್‌, ಬೆಳ್ತಂಗಡಿ ಸ್ಧಳೀಯ‌ ಸಂಸ್ದೆಯ ಕಾರ್ಯದರ್ಶಿ ಪ್ರಮೀಳಾ , ಜಿಲ್ಲಾ ಸಹಾಯಕ ಆಯುಕ್ತರಾದ ಬಿ ಸೋಮಶೇಖರ ಶೆಟ್ಟಿ ಮತ್ತು ಅನ್ನಪೂರ್ಣ ಛತ್ರದ ನಿರ್ವಹಣಾಧಿಕಾರಿಯಾದ ಜಿ ಸುಬ್ರಮಣ್ಯ ಪ್ರಸಾದ್‌ ಹಸಿರು ನಿಶಾನೆ ತೋರಿಸಿ ಪ್ರಯಾಣಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅನ್ನಪೂರ್ಣ ಛತ್ರದ ಭರತ್‌ರಾಜ್‌ ಜೈನ್‌, ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ, ರೋವರ್‌ ಸ್ಕೌಟ್‌ ಲೀಡರ್‌ ಲಕ್ಷ್ಮೀಶ ಭಟ್ಟ,ರೋವರ್ ಸರ್ವೇಶ್‌ ಜೈನ್‌, ತೇಜಸ್ವಿ ಹೆಗಡೆ ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ಬೆಳ್ತಂಗಡಿ ಜಮೀಯ್ಯತುಲ್ ಫಲಾಹ್ ಘಟಕದ ಪದಗ್ರಹಣ ಸಮಾರಂಭ

Suddi Udaya

ಮುಂಡಾಜೆ ಗ್ರಾ. ಪಂ. ಮಾಜಿ ಸದಸ್ಯ, ಪ್ರಗತಿಪರ ಕೃಷಿಕ, ಯಕ್ಷಗಾನ, ತಾಳಮದ್ದಳೆ ಹವ್ಯಾಸಿ ಕಲಾವಿದ ವಾಮದೇವ ಆಠವಳೆ ನಿಧನ

Suddi Udaya

ಬೆಳಾಲು: ಮಂಗಿಲ ನಿವಾಸಿ, ಕಬಡ್ಡಿ ಆಟಗಾರ ಸುನಿತ್‌ ಮಂಗಿಲ ನಿಧನ

Suddi Udaya

ಎಸ್.ಡಿ.ಎಂ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ಮೂಡುಕೋಡಿಯಲ್ಲಿ ವನಮಹೋತ್ಸವ ಆಚರಣೆ ಹಾಗೂ ಪ. ಜಾತಿ ಪ. ಪಂಗಡಗಳ ಮನೆಯವರಿಗೆ ಗೃಹೋಪಯೋಗಿ ವಸ್ತುಗಳ ವಿತರಣೆ

Suddi Udaya

ನಾರಾವಿ ಮಾಂಡೋವಿ ಮೋಟಾರ್ ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆಗೆ ವಿಶೇಷ ಕೊಡುಗೆ

Suddi Udaya
error: Content is protected !!