September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ ಶಾಲೆಯ ಶತಮಾನೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ನಡ: 100ರ ವರ್ಷಾಚರಣೆ ಸಂಭ್ರಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇದರ ಶತಮಾನೋತ್ಸವ ಸಮಿತಿ ರಚನೆಗೊಂಡಿದೆ.

ಈ ಶಾಲೆಯನ್ನು 1925ನೇ ಇಸವಿಯಲ್ಲಿ ನಡ ಪೆರ್ಮಾಣು ಬಸದಿಯಲ್ಲಿ ನಡ ಗುತ್ತು ಚಂದಯ್ಯ ಅಜ್ರಿಯವರು ಆರಂಭಿಸಿದ್ದರು.. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಮುನಿರಾಜ ಅಜ್ರಿ, ಕಾರ್ಯಾಧ್ಯಕ್ಷರಾಗಿ ಶಶಿಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿಯಾಗಿ ಸಯ್ಯದ್ ಹಬೀಬ್ ಸಾಹೇಬ್ ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಧ್ಯಕ್ಷರುಗಳಾಗಿ ಶಾಸಕ ಹರೀಶ್ ಪೂಂಜ, ಮೆಸ್ಕಾಂ ನಿಗಮ ಅಧ್ಯಕ್ಷ ಕೆ. ಹರೀಶ್ ಕುಮಾರ್, ಶಾಲಾ ಸಂಸ್ಥಾಪಕ ಮನೆತನದ ಧನಂಜಯ ಅಜ್ರಿ ನಡಗುತ್ತು, ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇವರು ಮಾರ್ಗದರ್ಶನ ನೀಡಲಿದ್ದಾರೆ. ಪ್ರಧಾನ ಸಂಚಾಲಕರಾಗಿ ಡಾ. ಸತೀಶ್ಚಂದ್ರ ಸೂರ್ಯಗುತ್ತು, ಉಪಾಧ್ಯಕ್ಷರುಗಳಾಗಿ ಅಜಿತ್ ಕುಮಾರ್ ಆರಿಗ, ಜಯ ಶೆಟ್ಟಿ, ಶ್ಯಾಮಸುಂದರ್, ಅಪ್ಪು, ಸ್ಟೇನಿ ಪಿಂಟೋ, ಶ್ರೀಮತಿ ಗ್ರೇಸಿ ವೇಗಸ್ ಹರೀಶ್ಚಂದ್ರ ಗೌಡ, ವಸಂತ್ ಗೌಡ, ಸಲಹೆಗಾರರಾಗಿ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಮಾಜಿ ಜಿ.ಪಂ. ಸದಸ್ಯ ಬಿ. ರಾಜಶೇಖರ ಅಜ್ರಿ, ಹಳೆ ವಿದ್ಯಾರ್ಥಿ ಸಂಫದ ಅಧ್ಯಕ್ಷ ಧರಣೇಂದ್ರ ಕುಮಾರ್, ಎಸ್. ಡಿ. ಎಂ. ಸಿ. ಅಧ್ಯಕ್ಷ ಜನಾರ್ಧನ್ ನಾಯ್ಕ್, ಡಾ. ಪ್ರದೀಪ್ ನಾವೂರು ಲಯನ್ ಮುರಳಿ ಬಲಿಪ, ಕಾರ್ಯದರ್ಶಿಗಳಾಗಿ ವಸಂತ್ ಗೌಡ ವಿಜಿ ಕೂಲ್, ಜಾಕಿರ್ ಹುಸೇನ್, ಶ್ರೀಮತಿ ಸಂಧ್ಯಾ ಜೈನ್, ಸಂಘಟನಾ ಕಾರ್ಯದರ್ಶಿಗಳಾಗಿ ವಿಜಯ ಗೌಡ, ಜಯಂತ ಗೌಡ ಕೊಯಗುಡ್ಡೆ, ಜತೆ ಕೋಶಾಧಿಕಾರಿಯಾಗಿ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ, ಜತೆ ಕಾರ್ಯದರ್ಶಿಗಳಾಗಿ ವಿಕ್ಟರ್ ಮಾಡ್ತಾ, ಶ್ರೀಮತಿ ಸುಜಾತಾ ಎಸ್., ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಸುಮಾರು 60 ವಿದ್ಯಾಭಿಮಾನಿಗಳನ್ನು ಆಯ್ಕೆ ಮಾಡಲಾಯಿತು.

ಶತಮಾನೋತ್ಸವ ಸಮಿತಿ ವತಿಯಿಂದ ಶಾಲೆಗೆ ಸುಸಜ್ಜಿತ ರಂಗ ಮಂದಿರ, ಇಂಟರ್ ಲಾಕ್, ಆವರಣ ಗೋಡೆ, ದ್ವಾರ ಇತ್ಯಾದಿ ಶಾಶ್ವತ ಕಾಮಗಾರಿಗಳನ್ನು ಮಾಡುವುದೆಂದು ನಿರ್ಧರಿಸಲಾಗಿದೆ.

Related posts

ಅತ್ಯುತ್ತಮ ಸೇವೆಗೆ ಹೆಸರುವಾಸಿ ಗುರುವಾಯನಕೆರೆಯ ಹೋಟೆಲ್ ರೇಸ್ ಇನ್

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆ

Suddi Udaya

ಉಜಿರೆ: ರತ್ನಮಾನಸದಲ್ಲಿ ಮಾತೃ, ಪಿತೃ ,ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮ

Suddi Udaya

ಬಳಂಜ ಶಾಲಾ ಅಮೃತ ಮಹೋತ್ಸವ ಸಮಿತಿಯಿಂದ ಮೆಸ್ಕಾಂ ಅಧ್ಯಕ್ಷ ಕೆ‌.ಹರೀಶ್ ಕುಮಾರ್ ಭೇಟಿ

Suddi Udaya

ಕೊಯ್ಯೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇಜಪ್ಪ ಗೌಡ

Suddi Udaya

ಬೆಳ್ತಂಗಡಿ: ಬಂಟರ ಸಂಘದ ವಲಯ ಸಮಿತಿ ಸಾಮಾನ್ಯ ಸಭೆ ಹಾಗೂ ವಲಯ ಸಮಿತಿ ರಚನೆ

Suddi Udaya
error: Content is protected !!