ಬೆಳ್ತಂಗಡಿ : ಖ್ಯಾತ ಬೆಂಗಳೂರಿನ ವಕೀಲರಾದ ಸಿ.ವಿ.ನಾಗೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. 39/2025 ಧರ್ಮಸ್ಥಳ ಪ್ರಕರಣಕ್ಕೆ ಸ್ಪೋಟಕ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ 39/2025 ಪ್ರಕರಣ ಎಸ್ಐಟಿ ತನಿಖೆ ನಡೆಸುತ್ತಿದ್ದು. ಈ ಪ್ರಕರಣದಲ್ಲಿ ಇನ್ನೂ ಮುಂದೆ ಧರ್ಮಸ್ಥಳ ಪರ ನ್ಯಾಯಾಲಯದಲ್ಲಿ ವಾದಿಸಲು ಬೆಂಗಳೂರಿನ ಖ್ಯಾತ ವಕೀಲರ ಸಿ.ವಿ.ನಾಗೇಶ್ ಡಿ.31 ರಂದು ಮಧ್ಯಾಹ್ನ 2:30 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದು ವಕಾಲತ್ತು ಪಡೆಯಲಿದ್ದು. ಇವರ ಜೊತೆ ಹಿರಿಯ ನ್ಯಾಯಾವಾದಿ ಮಹೇಶ್ ಕಜೆ ಕೂಡ ಭಾಗಿಯಾಗಲಿದ್ದಾರೆ.











