25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬರೆಂಗಾಯ ಸ.ಉ. ಹಿ. ಪ್ರಾ. ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಮತ್ತು ಅಮೃತವಿದ್ಯಾನಿಧಿ ಉದ್ಘಾಟನೆ

ನಿಡ್ಲೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬರೆಂಗಾಯ ಇಲ್ಲಿ ಎಲ್ ಕೆ ಜಿ ತರಗತಿ ಮತ್ತು ಅಮೃತವಿದ್ಯಾನಿಧಿ ಉದ್ಘಾಟನಾ ಸಮಾರಂಭವು ಜ.1ರಂದು ಜರಗಿತು.

ಕಾರ್ಯಕ್ರಮದ ಘನ ಅಧ್ಯಕ್ಷ ಸ್ಥಾನವನ್ನು ರುಕ್ಷ್ಮಯ ಪೂಜಾರಿ ಎಸ್ ಡಿ ಎಂ ಸಿ ಅಧ್ಯಕ್ಷರು ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಗ್ರಿಲೀಫ್ ಇಂಡಸ್ಟ್ರಿಯ ಮಾಲಕ ಅವಿನಾಶ್ ರಾವ್ ಉದ್ಘಾಟಿಸಿ ಎಲ್ ಕೆಜಿ ತರಗತಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪುರಂದರ ಗೌಡ ಗಣೇಶ್ ಸ್ಕೋರ್ ಮಾಲಕರು, ನವೀನ್ ಕುಮಾರ್ ಗಾಂತ್ರಂಡ ಗೌರವ ಅಧ್ಯಕ್ಷರು ನಿಸರ್ಗ ಯುವಜನೇತರ ಮಂಡಲ (ರಿ) ಬರಂಗಾಯ, ಕೃಷ್ಣಕುಮಾ‌ರ್ ಕಾಟ್ಲ ಗೌರವ ಅಧ್ಯಕ್ಷರು ಜ್ಯೋತಿ ಹಳೆ ವಿದ್ಯಾರ್ಥಿ ಸಂಘ ಬರೆಂಗಾಯ, ಭಾಗವಹಿಸಿದ್ದರು.

ಶಿಕ್ಷಕ ಸ್ವಾಮಿ ಎಚ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಗುರುಗಳು ಗೋಪಾಲ್ ಸ್ವಾಗತಿಸಿದರು. ಮರಿಯಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಪೋಷಕರು, ವಿದ್ಯಾಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ ಕೆ ಜಿ ಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಯಿತು.

Related posts

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಿಂದ ನಿವೃತ್ತ ಶಿಕ್ಷಕ ದಿ| ದೇವಪ್ಪ ಗೌಡರಿಗೆ ಸಂತಾಪ

Suddi Udaya

ಕೊಕ್ರಾಡಿ -ಸಾವ್ಯ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಮೂಡುಬಿದಿರೆ ಸ್ವಸ್ತೀಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರಿಂದ ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ನೂರುಲ್ ಹುದಾ ಮದ್ರಸ ಕನ್ನಡಿಕಟ್ಟೆಯಲ್ಲಿ ವೈಭವದ ‘ಫೈಳಾನ್ 2026 ಮೀಲಾದ್ ಫೆಸ್ಟ್”: ಟೈಗ್ರಿಸ್ ತಂಡ ಚಾಂಪಿಯನ್

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆ

Suddi Udaya

ಸಿಂಧೂರ ಶೆಟ್ಟಿ ರಚಿಸಿದ ಸ್ಕ್ರಿಬಲ್ ಆರ್ಟ್ ಇಂಡಿಯಾ ಬುಕ್ ಆಪ್ ರೆಕಾರ್ಡ್‌ಗೆ ಸೇರ್ಪಡೆ

Suddi Udaya
error: Content is protected !!