ನಿಡ್ಲೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಬರೆಂಗಾಯ ಇಲ್ಲಿ ಎಲ್ ಕೆ ಜಿ ತರಗತಿ ಮತ್ತು ಅಮೃತವಿದ್ಯಾನಿಧಿ ಉದ್ಘಾಟನಾ ಸಮಾರಂಭವು ಜ.1ರಂದು ಜರಗಿತು.

ಕಾರ್ಯಕ್ರಮದ ಘನ ಅಧ್ಯಕ್ಷ ಸ್ಥಾನವನ್ನು ರುಕ್ಷ್ಮಯ ಪೂಜಾರಿ ಎಸ್ ಡಿ ಎಂ ಸಿ ಅಧ್ಯಕ್ಷರು ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಅಗ್ರಿಲೀಫ್ ಇಂಡಸ್ಟ್ರಿಯ ಮಾಲಕ ಅವಿನಾಶ್ ರಾವ್ ಉದ್ಘಾಟಿಸಿ ಎಲ್ ಕೆಜಿ ತರಗತಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪುರಂದರ ಗೌಡ ಗಣೇಶ್ ಸ್ಕೋರ್ ಮಾಲಕರು, ನವೀನ್ ಕುಮಾರ್ ಗಾಂತ್ರಂಡ ಗೌರವ ಅಧ್ಯಕ್ಷರು ನಿಸರ್ಗ ಯುವಜನೇತರ ಮಂಡಲ (ರಿ) ಬರಂಗಾಯ, ಕೃಷ್ಣಕುಮಾರ್ ಕಾಟ್ಲ ಗೌರವ ಅಧ್ಯಕ್ಷರು ಜ್ಯೋತಿ ಹಳೆ ವಿದ್ಯಾರ್ಥಿ ಸಂಘ ಬರೆಂಗಾಯ, ಭಾಗವಹಿಸಿದ್ದರು.
ಶಿಕ್ಷಕ ಸ್ವಾಮಿ ಎಚ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಗುರುಗಳು ಗೋಪಾಲ್ ಸ್ವಾಗತಿಸಿದರು. ಮರಿಯಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಪೋಷಕರು, ವಿದ್ಯಾಭಿಮಾನಿಗಳು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ ಕೆ ಜಿ ಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಲಾಯಿತು.













