September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಎಸ್.ಡಿ.ಯಂ ಕಾಲೇಜಿನಲ್ಲಿ ಶ್ರೀಕೃಷ್ಣ ಲೀಲೆ-ಕಂಸ ವಧೆ ಇಂಗ್ಲೀಷ್ ತಾಳಮದ್ದಳೆ

ಉಜಿರೆ: ಉಜಿರೆ ಎಸ್.ಡಿ.ಯಂ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಲೀಲೆ-ಕಂಸ ವಧೆ ಇಂಗ್ಲೀಷ್ ತಾಳಮದ್ದಳೆಯು ಡಿ.31ರಂದು ಎಸ್.ಡಿ.ಯಂ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರುಗಿತು.

ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ದೀಪಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ IQAC ಸಂಯೋಜಕ ಗಜಾನನ ಆರ್ ಭಟ್, ಸಾಂಸ್ಕೃತಿಕ ಸಮಿತಿ ಸಂಯೋಜಕ ಡಾ. ನಾಗಣ್ಣ, ಯಕ್ಷಗಾನ ಸಂಯೋಜಕರಾದ ಶ್ರೇಯಸ್ ಪಾಳಂದೆ, ಸಚಿನ್ ಹೆಬ್ಬಾರ್, ವಿದ್ಯಾರ್ಥಿ ಸಂಯೋಜಕರಾದ ಮನಸ್ವಿ, ಅಮೋಘ ಶಂಕರ ಉಪಸ್ಥಿತರಿದ್ದರು.
ಭಾಗವತರಾಗಿ ಸಿಂಚನ ಮೂಡುಕೋಡಿ, ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಸುಧನ್ವ, ಮುಮ್ಮೇಳದಲ್ಲಿ ಮನಸ್ವಿ (ಪೂತನಿ), ಅನನ್ಯ ಶೆಟ್ಟಿ (ಮಾಯಾ ಪೂತನಿ), ಮೌಲ್ಯ ಎಸ್. ಜೈನ್ (ಶ್ರೀಕೃಷ್ಣ), ಅಂಕಿತ ಬಲರಾಮ, ತೇಜಸ್ (ವಿಜಯ), ನಿರಂಜನ್ (ಶಕಟ), ವರುಣ್ (ಕಂಸ) ಪಾತ್ರ ನಿರ್ವಹಿಸುತ್ತಾರೆ.

ಡಾ. ಶ್ರುತಕೀರ್ತಿರಾಜ್ ಜೈನ್ ಅರ್ಥರಚನೆ, ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶಿಸುತ್ತಾರೆ. ಪವಿತ್ರ ಜೈನ್ ನಿರೂಪಿಸಿದರು. ಸಿಂಚನ, ಸಾಕ್ಷ, ಯಶ್ಮಿತಾ, ಶ್ವೇತ ಪ್ರಾರ್ಥಿಸಿದರು. ಸಿಂಚನ ಸ್ವಾಗತಿಸಿದರು. ಅಮೋಘ ಶಂಕರ ವಂದಿಸಿದರು.

Related posts

ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ: ಚರ್ಮಗಂಟು ರೋಗದ ಎರಡನೇ ಅಲೆಯೇ ಎಂಬ ಸಂದೇಹ

Suddi Udaya

ಸುಣ್ಣದಕೆರೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ವಸಂತಿರವರಿಗೆ ಸನ್ಮಾನ

Suddi Udaya

ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಗೆ ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಗೌರವ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನ ಶ್ರುತಿ ಮಣಕೀಕರ್ ಅವರಿಗೆ ಪಿ.ಎಚ್.ಡಿ ಪದವಿ

Suddi Udaya
error: Content is protected !!