ಬೆಳ್ತಂಗಡಿ: ದ. ಕ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಡಿ.31ರಂದು ನಿವೃತ್ತಿ ಹೊಂದಿದ ಹಾಜಿ ಅಬೂಬಕರ್ ಅವರಿಗೆ ಕಾಜೂರು ಮತ್ತು ಕಿಲ್ಲೂರು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಆಡಳಿತ ಮಂಡಳಿ ಅಧ್ಯಕ್ಷ ಕೆ ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್ ಕಾಜೂರು, ಕೋಶಾದಿಕಾರಿ ಡಿವೈ ಉಮರ್, ಸದಸ್ಯರಾದ ಬದ್ರುದೀನ್, ಎಂಜೆಎಂ ಕಿಲ್ಲೂರು ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ ಹಾಗೂ BRR ಅಬ್ದುಲ್ ರಹಿಮಾನ್ ಹಾಜಿ ಮುಂತಾದವರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಕಾಜೂರು ದರ್ಗಾ ಅಧ್ಯಕ್ಷ ಕೆ ಯು ಇಬ್ರಾಹಿಂ ಹಾಗೂ ಎಮ್.ಜೆ.ಎಮ್ ಕಿಲ್ಲೂರು ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಅವರು, ಹಾಜಿ ಅಬೂಬಕ್ಕರ್ ರವರು ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ ಈದೀಗ ನಿವೃತ್ತಿ ಹೊಂದುತ್ತಿದ್ದು, ಅವರ ಕಾರ್ಯವೈಖರಿಯನ್ನು ಕಾಜೂರು ಕಿಲ್ಲೂರು ಆಡಳಿತ ಮಂಡಳಿತ ಶ್ಲಾಘಿಸುತ್ತದೆ ಎಂದರು.











