July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

ಬೆಳ್ತಂಗಡಿ: ಬಡಗಕಾರಂದೂರು( ಅಳದಂಗಡಿ) ಗ್ರಾಮದ ಫಲ್ಗುಣಿ ನದಿಯ ಬಾವಲಿಗುಂಡಿ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನಿಂದ ಪಶ್ಚಿಮದ ಕಡೆಗಿನ ಸೂಳಬೆಟ್ಟು ವಾಳ್ಯದವರ ಕೃಷಿ ನೀರಾವರಿಗೆ ಅನುಕೂಲವಾಗಲೆಂದು ಕಾಲುವೆ ನಿರ್ಮಾಣಕ್ಕೆ ರಾಜ್ಯದ ಸಣ್ಣ ನೀರಾವರಿ ಇಲಾಖೆಯಿಂದ ರೂ. 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಲುವೆ ನಿರ್ಮಾಣ ಕಾರ್ಯದ ಪೂರ್ವಭಾವಿಯಾಗಿ ಜ.6 ರಂದು ಬಾವಲಿಗುಂಡಿ ಪರಿಸರದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಅವರು ಹಾಲು ಎರೆದು ಕಾಮಗಾರಿಗೆ ಚಾಲನೆ ನೀಡಿದರು.
ಅಳದಂಗಡಿ ಗ್ರಾ.ಪಂ.ಸದಸ್ಯ ಪ್ರವೀಣ, ಬಳಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ, ಸ್ಥಳೀಯರಾದ ಮುರಲೀಧರ ಗೋಖಲೆ, ಪ್ರಭಾಕರ ಆಠವಳೆ, ನಿರಂಜನ ಜೋಶಿ, ರಾಜೇಂದ್ರ ಗೋಖಲೆ, ಅಮರೇಶ ಜೋಶಿ, ಪ್ರಶಾಂತ ನಾತು, ಲೋಲಾಕ್ಷ ಶೆಟ್ಟಿ ಪಡ್ಯೋಡಿ, ಸದಾನಂದ ಪೂಜಾರಿ ಉಂಗಿಲ ಬೈಲು, ಕಟ್ಟೂರು ಶಿವ ಭಟ್, ಶಂಕರ ಭಟ್, ಸಂತು, ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ವಸಂತ ಪೂಜಾರಿ ಉಪಸ್ಥಿತರಿದ್ದರು.

ಪುರೋಹಿತ ಪದ್ಮನಾಭ ಜೋಶಿ ಭೂಮಿ ಪೂಜನ ನೆರವೇರಿಸಿದರು. ಕೂಡಲೇ ಅಣೆಕಟ್ಟಿಗೆ ಹಲಗೆ ಇಳಿಸಲಾಗುವುದು ಹಾಗೂ ಮುಂದಿನ ಮಳೆಗಾಲದೊಳಗೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಇಂಜಿನಿಯರ್ ತಿಳಿಸಿದರು. ಪತ್ರಕರ್ತ ದೀಪಕ ಆಠವಳೆ ಸ್ವಾಗತಿಸಿ, ವಂದಿಸಿದರು.

ರಸ್ತೆ ಅಭಿವೃದ್ಧಿ ಶಾಸಕರಿಗೆ ಬೇಡಿಕೆ: ಇದೇ ವೇಳೆ ಸ್ಥಳೀಯರು, ಬಳಂಜವನ್ನು ಸಂಪರ್ಕಿಸುವ ನಡಾಯಿ – ಆನೆಪಿಲ ಮಣ್ಣಿನ ರಸ್ತೆಯನ್ನು ಸರ್ವ‌ಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

Related posts

ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ರೂ.29.79 ಲಕ್ಷ ನಿವ್ವಳ ಲಾಭ – ಶೇ 10 ಡಿವಿಡೆಂಡ್ ಘೋಷಣೆ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ: ಎಸ್ಡಿಪಿಐ ಮುಖಂಡರಿಂದ ಸಮಸ್ಯೆ ಬಗೆಹರಿಸಲು ಮನವಿ

Suddi Udaya

ಕಳೆಂಜ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಸಭಾಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 2 ಲಕ್ಷ ಅನುದಾನ

Suddi Udaya

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಈದುಲ್ – ಹದಾ ಬಕ್ರೀದ್ ಆಚರಣೆ

Suddi Udaya

ಇಲಾಖಾ ಅಧಿಕಾರಿಗಳು ಗೈರು, ಕೊಕ್ಕಡ ಗ್ರಾಮ ಸಭೆ ಮುಂದೂಡಿಕೆ

Suddi Udaya
error: Content is protected !!