ಕೊಕ್ಕಡ : ಕೊಕ್ಕಡ ಶ್ರೀ ರಾಮ ಭಜನಾ ಮಂದಿರದ ಹಿರಿಯರಾದ ದಿ| ಪುರುಷೋತ್ತಮ ನಾಯಕ್ ಬರ್ಗುಳ ಇವರ ಪುತ್ರ ರಾಘವೇಂದ್ರ ನಾಯಕ್ ಬರ್ಗುಳ, ಶಿಶಿಲ ಇವರು ಜ. 6ರಂದು ರಾಮ ಸೇವಾ ಮಂದಿರದ ಪಾಕಶಾಲೆಯ ಕಾಮಗಾರಿಗೆ ರೂ. 1 ಲಕ್ಷ ಮೊತ್ತವನ್ನು ದೇಣಿಗೆಯಾಗಿ ನೀಡಿದರು. ಈ ಹಿಂದೆಯೂ ಕಟ್ಟಡದ ಕಾಮಗಾರಿಗೆ ಹಲವಾರು ಸಲ ದೇಣಿಗೆಯನ್ನು ನೀಡಿರುತ್ತಾರೆ.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ, ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷ ಪುರುಷೋತ್ತಮ ಕೊಕ್ಕಡ, ಶ್ರೀ ರಾಮ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಕೊಕ್ಕಡ, ಕೋಶಾಧಿಕಾರಿ ಫಣಿರಾಜ್ ಜೈನ್ ಕೊಕ್ಕಡ, ಸದಸ್ಯರು ಹಾಗೂ ಅಂಬಿಕಾ ಕ್ಲಿನಿಕ್ ಡಾ. ಗಣೇಶ್ ಪ್ರಸಾದ್ , ಸಾಂತಪ್ಪ ಮಡಿವಾಳ, ಕೀರ್ತನ್ ಭಂಡಾರಿ, ಗಣೇಶ್ ದೇವಾಡಿಗ, ಗಣೇಶ್ ಹಿತ್ತಿಲು, ಪ್ರವೀಣ್ ಕೊಕ್ಕಡ ಉಪಸ್ಥಿತರಿದ್ದರು.











